CrimeDistricts

ಕೊಡಿಸಿದ್ದ ಸಾಲ ವಾಪಸ್‌ ಮಾಡದ ಸ್ನೇಹಿತ; ಮನನೊಂದು ದಂಪತಿ ಆತ್ಮಹತ್ಯೆ

ಮೈಸೂರು; ಸ್ನೇಹಿತ ಕಷ್ಟದಲ್ಲಿದ್ದ ಅಂತ ಹಣ, ಚಿನ್ನಾಭರಣ ಕೊಟ್ಟಿದ್ದ. ಆದ್ರೆ ಸಾಲ ಪಡೆದ ವ್ಯಕ್ತಿ ಅದನ್ನು ವಾಪಸ್‌ ಕೊಟ್ಟಿಲ್ಲ ಅಂತ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದೆ. ಮೈಸೂರಿನ ಯರಗನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.

ಮೂವತ್ಕಾಲ್ಕು ವರ್ಷ ವಿಶ್ವ ಹಾಗೂ ಇಪ್ಪತ್ತೆಂಟು ವರ್ಷದ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡವರು. ಈ ದಂಪತಿ ಪರಿಚಯವಿದ್ದ ಶಿವು ಎಂಬಾತನಿಗೆ 5 ಲಕ್ಷ ರೂಪಾಯಿ ಸಾಲ ಕೊಡಿಸಿತ್ತು. ಆದ್ರೆ ಹಣ ಪಡೆದ ಶಿವು ಸಾಲ ವಾಪಸ್‌ ಮಾಡಿರಲಿಲ್ಲ. ಸತಾಯಿಸುತ್ತಲೇ ಬಂದಿದ್ದ.

ಇನ್ನೊಂದೆಡೆ ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ಕೂಡಾ ವಿಶ್ವ ಚಿನ್ನಾಭರಣಗಳನ್ನು ಕೊಟ್ಟಿದ್ದ. ಆತ ಕೂಡಾ ಚಿನ್ನಾಭರಣ ವಾಪಸ್‌ ಕೊಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದಾಗಿ ಬೇಸತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post