CrimeDistricts

6677 ಕ್ವಿಂಟಾಲ್‌ ಅಕ್ಕಿ ಕಳವು ಪ್ರಕರಣ; ದೂರು ಕೊಟ್ಟವನೇ ಆರೋಪಿ!

ಯಾದಗಿರಿ; 6,677 ಕ್ವಿಂಟಾಲ್‌ ಸೊಸೈಟಿ ಅಕ್ಕಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ದೂರು ಕೊಟ್ಟ ಅಧಿಕಾರಿಯೇ ಇದರಲ್ಲಿ ಆರೋಪಿ ಅನ್ನೋದು ಗೊತ್ತಾಗಿದೆ.. ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಗೋದಾಮಿನಲ್ಲಿ ಭಾರೀ ಪ್ರಮಾಣದ ಅಕ್ಕಿ ಕಳವಾಗಿತ್ತು.. ಈ ಸಂಬಂಧ ಹಾರ ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಳಿ ದೂರು ಕೊಟ್ಟಿದ್ದರು.. ಇದೀಗ ಇದೇ ಅಧಿಕಾರಿ ಪ್ರಕರಣದ A14 ಆರೋಪಿ ಎಂದು ತಿಳಿದುಬಂದಿದೆ..
ಪ್ರಕರಣದ ತನಿಖೆ ನಡೆಸಿದ್ದ ಶಹಾಪುರ ಪೊಲೀಸರು ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.. ಇದರಲ್ಲಿ ಒಟ್ಟು 17 ಆರೋಪಿಗಳ ಪಾತ್ರವನ್ನು ಪ್ರಸ್ತಾಪಿಸಲಾಗಿದೆ.. ಇದರಲ್ಲಿ ಹಾರ ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಳಿ ಕೂಡಾ ಇದ್ದಾರೆ.. ಸರ್ಕಾರಿ ಗೋದಾಮಿನಲ್ಲಿದ್ದ 6,677 ಕ್ವಿಂಟಾಲ್‌ ಅಕ್ಕಿಯನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ.. 2023ರ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.
ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಈಗ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ.. ಇದರಲ್ಲಿ ಪ್ರಕರಣದ ಬಗ್ಗೆ ದೂರು ಕೊಟ್ಟ ಅಧಿಕಾರಿ ಕೂಡಾ ಆರೋಪಿ ಅನ್ನೋದು ಗೊತ್ತಾಗಿದೆ..

Share Post