CrimeDistricts

ಕೂದಲು ವ್ಯಾಪಾರ ಮಾಡುವ ಬಾಲಕನ ಬರ್ಬರ ಹತ್ಯೆ

ವಿಜಯಪುರ; ಕೂದಲು ವ್ಯಾಪಾರ ಮಾಡಲು ತೆರಳಿದ್ದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ರಾಯಭಾಗ ಬಳಿಯ ಹಾರೋಗೇರಿಯಲ್ಲಿ ನಡೆದಿದೆ. ಹದಿನಾರು ವರ್ಷದ ಕಾಮಪ್ಪ ಎಂಬಾತನೇ ಕೊಲೆಯಾದ ಬಾಲಕನಾಗಿದ್ದಾರೆ.

ವಿಜಯಪುರದವನಾದ ಕಾಮಪ್ಪ ಮೂರು ದಿನಗಳ ಹಿಂದೆ ರೋಹಿತ್‌ ಎಂಬಾತನ ಜೊತೆ ಹಾರೋಗೇರಿಗೆ ಕೂದಲು ವ್ಯಾಪಾರ ಮಾಡಲು ಹೋಗಿದ್ದ. ಈ ವೇಳೆ ಕೆಲವರು ವ್ಯಾಪಾರಕ್ಕೆ ಇಲ್ಲಿಗೆ ಯಾಕೆ ಬಂದಿದ್ದೀಯಾ ಎಂದು ಕ್ಯಾತೆ ತೆಗೆದಿದ್ದಾರೆ. ಬಡಿಗೆ, ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ದೇಹವನ್ನು ಬಾವಿಗೆ ಎಸೆದಿದ್ದಾರೆ.

ಗಂಗಪ್ಪ ಹಾಗೂ ಅವನ ತಂದೆ ಸೇರಿದಂತೆ 15 ಜನರು ಈ ಹತ್ಯೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾವಿಯಲ್ಲಿ ಕಾಮಪ್ಪ ಮೃತ ದೇಹ ಪತ್ತೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post