Crime

ಗುಂಡಿಕ್ಕಿ ಭಾರತೀಯ ಲೋಕದಳದ ಅಧ್ಯಕ್ಷ ಬರ್ಬರ ಹತ್ಯೆ!

ಹರಿಯಾಣ; ಹರಿಯಾಣದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳು ಭಾರತೀಯ ರಾಷ್ಟ್ರೀಯ ಲೋಕದಳದ ಹರಿಯಾಣ ಘಟಕದ ಅಧ್ಯಕ್ಷ ನಫ್ ಸಿಂಗ್ ರಾಥೀ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಜಜ್ಜರ್ ಜಿಲ್ಲೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ನಫ್‌ ಸಿಂಗ್‌ ಅವರು ಸಾವನ್ನಪ್ಪಿದ್ದಾರೆ.

ನಫ್‌ ಸಿಂಗ್‌ ರಾಥೀ ಮಾಜಿ ಶಾಸಕ ಕೂಡಾ ಆಗಿದ್ದಾರೆ. ಅವರು ಕಾರಿನಲ್ಲಿ ಹೋಗುತ್ತಿದ್ದರು. ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ಮತ್ತೊಂದು ಕಾರಿನಲ್ಲಿ ಬಂದ ಅಪರಿಚಿತರ ಗುಂಪು ನಿರಂತರ ಗುಂಡಿನ ದಾಳಿ ಮಾಡಿದೆ.

40-50 ಸುತ್ತು ಗುಂಡಿನ ದಾಳಿ;

ಮಾಜಿ ಶಾಸಕ ರಾಥೀ ಕಾರಿನ ಮೇಲೆ ಸುಮಾರು 40 ರಿಂದ 50 ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ಇದೇ ವೇಳೆ ಕಾರಿನಲ್ಲಿದ್ದ ಲೋಕದಳದ ಕಾರ್ಯಕರ್ತ ಜೈಕಿಶನ್‌ ಕೂಡಾ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ  ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಂಡೈ i10 ಕಾರಿನಲ್ಲಿ ದುಷ್ಕರ್ಮಿಗಳು ಆಗಮಿಸಿದ್ದರು. ಮಾಜಿ ಶಾಸಕ ರಾಥೀ ಕಾರು ಅಡ್ಡಹಾಕಿ ಗುಂಡು ಹಾರಿಸಿದ್ದಾರೆ. ಹಲವಾರು ಸುತ್ತು ಗುಂಡು ಹಾರಿಸಿದ್ದರಿಂದ ಕಾರು ಸಂಪೂರ್ಣ ಹಾನಿಯಾಗಿದೆ.  ಸೆಂಟ್ರಲ್ ಇಂಟೆಲಿಜೆನ್ಸ್​ ಏಜನ್ಸಿ ಮತ್ತು ಎಸ್​​​​​ಟಿಎಫ್ ತಂಡಗಳು ತನಿಖೆ ಶುರು ಮಾಡಿದ್ದು,  ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಲಾಗಿದೆ.

ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ಬ್ರಹ್ಮಶಕ್ತಿ ಸಂಜೀವಿನಿ ಹಾಸ್ಪಿಟಲ್​​ಗೆ ದಾಖಲಿಸಸಲಾಗಿದೆ.

Share Post