DistrictsPolitics

ನಮ್ಮ ಹೈಕಮಾಂಡ್‌ ಜೊತೆ 50 ಶಾಸಕರು ಸಂಪರ್ಕದಲ್ಲಿದ್ದಾರೆ; ಮುರುಗೇಶ್‌ ನಿರಾಣಿ ಬಾಂಬ್‌

ವಿಜಯಪುರ; ನಮ್ಮ ಹೈಕಮಾಂಡ್‌ 50 ಮಂದಿ ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಹೊಸ ಬಾಂಬ್‌ ಸಿಡಿಸಿದ್ದಾರೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಚಿವ ಮರುಗೇಶ್‌ ನಿರಾಣಿ, ಈ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎರಡಲ್ಲ, ನಾಲ್ಕು ಬಣಗಳಿದ್ದು, ಆ ಪಕ್ಷದ ನಾಯಕರು ಒಂದು ಹೇಳಿದರೆ, ಮಾಡೋದು ಇನ್ನೊಂದು. ಕೆಲವರು 4 ಡಿಸಿಎಂ ಸ್ಥಾನ ಕೇಳುತ್ತಿದ್ದು, ಸಿಎಂ ವಿಚಾರದಲ್ಲೂ ಗೊಂದಲವಿದೆ. ಹೀಗಾಗಿ ಈ ಸರ್ಕಾರ ಐದು ವರ್ಷ ಪೂರೈಸೋದಿಲ್ಲ. ಸರ್ಕಾರವನ್ನು ನಾವ್ಯಾರೂ ಉರುಳಿಸೋದಿಲ್ಲ. ತಾನಾಗಿಯೇ ಪತನವಾಗುತ್ತೆ ಎಂದು ನಿರಾಣಿ ಹೇಳಿದ್ದಾರೆ.

Share Post