CrimeDistricts

ವಾಹನ ಡಿಕ್ಕಿ; ಚಿತ್ರದುರ್ಗ ಬಳಿ ಚಿರತೆ, ಕರಡಿ ಸಾವು

ಚಿತ್ರದುರ್ಗ(Chitradurga); ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಚಿರತೆ ಸಾವನ್ನಪ್ಪಿದೆ.. ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ.. ಹೊಸ ಹೈವೆ ತಮಟಕಲ್ಲು ಬೈಪಾಸ್ ಬಳಿಯ ಹೆದ್ದಾರಿಯಲ್ಲಿ ಚಿರತೆ ಮೃತದೇಹ ಸಿಕ್ಕಿದೆ..

ಇದನ್ನೂ ಓದಿ; ಮೊಬೈಲ್‌ ಬದಲು ವಾಟರ್‌ ಹೀಟರ್‌ ಕಾಯಲ್‌ ಕಿವಿಗಿಟ್ಟುಕೊಂಡು ಸಾವು!

ವಾಹನ ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡು ಚಿರತೆ ಸಾವನ್ನಪ್ಪಿದೆ.. ಯಾವ ವಾಹನ ಡಿಕ್ಕಿ ಹೊಡೆಯಿತು ಅನ್ನೋದು ಗೊತ್ತಾಗಿಲ್ಲ.. ಯಾಕಂದ್ರೆ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ.. ವಾರದ ಹಿಂದಷ್ಟೇ ಇದೇ ತಮಟಕಲ್ಲು ಬಳಿ ವಾಹನ ಡಿಕ್ಕಿಯಾಗಿ ಕರಡಿಯೊಂದು ಸಾವನ್ನಪ್ಪಿತ್ತು.. ಇದೀಗ ಅದೇ ಪ್ರದೇಶದಲ್ಲಿ ಚಿರತೆ ಸಾವನ್ನಪ್ಪಿದೆ.. ಚಿತ್ರದುರ್ಗದ ಸುತ್ತಲೂ ಹೀಗೆ ಪ್ರಾಣಿಗಳು ಬಲಿಯಾಗುತ್ತಿರುವುದಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ಸಂಚಾಲಕ ಟಿ..ರುದ್ರಮುನಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; 3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

Share Post