Districts

ನರಿ ಕಡಿತದಿಂದ 22 ದನಗಳ ಸಾವು

ಬೆಳಗಾವಿ : ಮೂಡಲಗಿ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹುಚ್ಚು ನರಿಯೊಂದು ತೋಡದಲ್ಲಿದ್ದ ದನಗಳಿಗೆ ಕಚ್ಚಿದ ಕಾರಣ 22ಕ್ಕೂ ಹೆಚ್ಚು ದನಗಳು ಸಾವನ್ನಪ್ಪಿರುವ ಘಟನೆ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಡಿ 26ರಿಂದ ಗ್ರಾಮದಲ್ಲಿ ಕೆಲವು ಆಕಳು, ಎಮ್ಮೆ, ಕರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಪಶು ಇಲಾಖೆಯ ಗಮನಕ್ಕೆ ಬಂದ ಕೂಡಲೇ ಡಾ ಎಕೆ ಚಂದ್ರಶೇಖರ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ವೈದ್ಯರ ತಂಡವನ್ನು ಕರೆಸಿ ಎಲ್ಲಾ ದನಗಳಿಗೆ ರೇಬಿಸ್‌ ಚುಚ್ಚುಮದ್ದನ್ನು ಕೊಡಿಸಿ ನಿಗಾವಹಿಸಿದ್ದಾರೆ. ಹುಚ್ಚು ನರಿಯು ಕಚ್ಚಿರುವ ಕಾರಣ ಈ ರೀತಿ ಆಗಿದೆ ಎಂದು ಗ್ರಾಮಸ್ಥರಿಗೆ ತಿಳಿಸಿ ದನ ಕರುಗಳ ಮೇಲೆ ಎಚ್ಚರವಹಿಸುವಂತೆ  ಹೇಳಿದ್ದಾರೆ.

ಸದ್ಯಕ್ಕೆ ದನ ಕರುಗಳ ಸಾವು ನಿಯಂತ್ರಿಸಿದೆ. ಸತ್ತ ದನಗಳ ಮೆದುಳನ್ನು ಬೆಂಗಳೂರು ಮತ್ತು ಊಟಿಯ ರೇಬಿಸ್‌ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಪರೀಕ್ಷಾ ವರದಿಗೆ ಕಾದಿದ್ದಾರೆ.

Share Post