CrimeDistricts

ಹಿಂದೂ ಸಂಘಟನೆ ಮೆರವಣಿಗೆ ವೇಳೆ ಕಲ್ಲು ತೂರಾಟ; ಸಿಎಂ ತವರು ಜಿಲ್ಲೆಯಲ್ಲಿ ಅಶಾಂತಿ

ಹಾವೇರಿ; ಸಿಎಂ ತವರು ಜಿಲ್ಲೆ ಹಾವೇರಿಯ ರಟ್ಟಿಹಳ್ಳಿ ಪಟ್ಟಣದಲ್ಲಿ ಹಿಂದೂ ಸಂಘಟನೆಗಳ ಮೆರವಣಿಗೆ ವೇಳೆ ಬೇಕಾಬಿಟ್ಟಿ ಕಲ್ಲು ತೂರಾಟ ನಡೆಸಲಾಗಿದೆ. ರಾಯಣ್ಣ ಪುತ್ಥಳಿ ಮೆರವಣಿಗೆಗೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸುತ್ತಿದ್ದರು. ಮೆರವಣಿಗೆ ಕಾರಂಜಿ ಸಕರ್ಲ್‌ ಬಳಿ ಬರುತ್ತಿದ್ದಂತೆ ಕೆಲ ಯುವಕರು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದಾರೆ.

ಮನೆ ಕಿಟಕಿಗಳು, ಕಾರುಗಳ ಮೇಲೆಲ್ಲಾ ಕಲ್ಲು ತೂರಲಾಗಿದೆ. ಇದರಿಂದಾಗಿ ಹಲವು ಮನೆಗಳ ಕಿಟಕಿ ಗಾಜುಗಳು, ಕಾರಿನ ಗಾಜುಗಳು ಪುಡಿಪಡಿಯಾಗಿವೆ. ಇದೇ ವೇಳೆ ಸಿಕ್ಕ ಆಟೋ ಚಾಲಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.  ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

Share Post