CrimeDistricts

ಶಾಲೆಯ ಮುಂಭಾಗವೇ ಯುವಕನ ಕತ್ತು ಕುಯ್ದು ದಾರುಣ ಹತ್ಯೆ; 10 ಯುವಕರಿಂದ ಕೃತ್ಯ!

ದೊಡ್ಡಬಳ್ಳಾಪುರ; ಶಾಲೆಯ ಮುಂಭಾಗವೇ ನಡು ರಸ್ತೆಯಲ್ಲೇ ಯುವಕನೊಬ್ಬನ ಕತ್ತು ಕುಯ್ದು ದಾರುಣವಾಗಿ ಕೊಲೆ ಮಾಡಲಾಗಿದೆ.. ಹತ್ತಕ್ಕೂ ಹೆಚ್ಚು ಯುವಕರ ಗುಂಪು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.. ದೊಡ್ಡಬಳ್ಳಾಪುರದ ಹೊರವಲಯದ ನವೋದಯ ಶಾಲೆಯ ಮುಂಭಾಗದಲ್ಲೇ ಈ ಕೃತ್ಯ ಎಸಗಲಾಗಿದ್ದು, ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ..

27 ವರ್ಷದ ಹೇಮಂತ್‌ ಕುಮಾರ್‌ ಎಂಬಾತನೇ ಕೊಲೆಯಾದ ದುರ್ದೈವಿ.. ಹಳೇ ದ್ವೇಷದ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಮಿಟ್ಟೆ ಅಲಿಯಾಸ್‌ ನರಸಿಂಹಮೂರ್ತಿ ಗ್ಯಾಂಗ್‌ ಈ ಕೊಲೆ ಮಾಡಿದೆ ಎಂದು ಹೇಳಲಾಗುತ್ತಿದೆ.. ಹತ್ತಕ್ಕೂ ಹೆಚ್ಚು ಮಂದಿಯಿದ್ದ ಗ್ಯಾಂಗ್‌ ಹೇಮಂತ್‌ ಕುಮಾರ್‌ ಮೇಲೆ ಮಚ್ಚು ಲಾಂಗ್‌ಗಳಿಂದ ದಾಳಿ ಮಾಡಿದ್ದಾರೆ.. ಕತ್ತು ಕತ್ತರಿಸಿದ್ದು, ಎದೆ ಭಾಗದಲ್ಲೂ ತಿವಿಯಲಾಗಿದೆ. ಅನಂತರ ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದುಹೋಗಿದ್ದಾರೆ..

ನಿನ್ನೆ ತಡ ರಾತ್ರಿ ಈ ಕೃತ್ಯ ಎಸಗಲಾಗಿದೆ.. ಹೇಮಂತ್‌ ರಾತ್ರಿ ಊಟವಾದ ಮೇಲೆ ವಾಕಿಂಗ್‌ಗೆ ಬಂದಿದ್ದರು.. ಇದೇ ಸಮಯ ಕಾಯುತ್ತಿದ್ದ ಕಿರಾತಕರು ಇದ್ದಕ್ಕಿದ್ದಂತೆ ದಾಳಿ ಮಾಡಿದ್ದಾರೆ…  ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ..

 

Share Post