BengaluruCinemaCrime

ಮೊಬೈಲ್‌ ಬಳಕೆ ಬಗ್ಗೆ ದರ್ಶನ್‌ ಹೇಳಿದ್ದೇನು..?; ಮಾತನಾಡಿದ್ದು ಒಪ್ಪಿಕೊಂಡ್ರಾ..?

ಬೆಂಗಳೂರು; ಜೈಲಲ್ಲಿ ರಾಜಾಥಿತ್ಯ ಹಾಗೂ ಮೊಬೈಲ್‌ ಬಳಕೆ ಬಗ್ಗೆ ತನಿಖೆ ನಡೆಯುತ್ತಿದೆ.. ಈ ಸಂಬಂಧ ಹುಳಿಮಾವು ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ವಿಚಾರಣೆ ಶುರು ಮಾಡಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ ಅವರನ್ನೂ ವಿಚಾರಗೊಳಪಡಿಸಲಾಗಿದೆ.. ಮೊಬೈಲ್‌ ಹೇಗೆ ಸಿಕ್ತು..? ಯಾವತ್ತು ಮಾತನಾಡಿದ್ದು, ಯಾರ ಜೊತೆ ಮಾತನಾಡಿದ್ದು ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದೆ.. ಅದಕ್ಕೆ ದರ್ಶನ್‌ ಕೆಲವೊಂದು ಉತ್ತರಗಳನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವರ ಇಲ್ಲದೆ ನಡೆಯಿತು ಮದುವೆ!; ಹನಿಮೂನ್‌ಗೆ ಹೋಗಿದ್ದು ಕೂಡಾ ಒಬ್ಬಳೇ!

ನಾನು ನನ್ನ ಕೊಠಡಿಯಲ್ಲಿ ಕುಳಿತಿದ್ದಾಗ ಏಕಾಏಕಿ ಒಬ್ಬ ಮೊಬೈಲ್‌ ಹಿಡಿದು ಬಂದ.. ನಿಮ್ಮ ಅಭಿಮಾನಿ ಮಾತನಾಡುತ್ತಿದ್ದಾನೆ ಮಾತನಾಡಿ ಎಂದು ತೋರಿಸಿದ.. ಅಭಿಮಾನಿ ಅಂದಿದ್ದರಿಂದ ನಾನು ಊಟ ಆಯ್ತಾ ಎಂದೆ. ಅವನು ಹೇಗಿದ್ದೀರಾ ಬಾಸ್‌ ಎಂದ, ನಾನು ಆರಾಮಾಗಿದ್ದೇನೆ ಎಂದು ಹೇಳಿದೆ.. ನಾನು ಅಷ್ಟೇ ಮಾತನಾಡಿದ್ದೇನೆ.. ಮೊಬೈಲ್‌ ತಂದವನು ಯಾರು, ಮಾತನಾಡಿದವರು ಯಾರು ಅನ್ನೋದು ನನಗೆ ಗೊತ್ತಿಲ್ಲ.. ಆತ ರೌಡಿ ಶೀಟರ್‌ ಅನ್ನೋದೂ ನನಗೆ ಗೊತ್ತಿರಲಿಲ್ಲ ಎಂದು ದರ್ಶನ್‌ ಹೇಳಿಕೊಂಡಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಏರಿಕೆ!

ಇನ್ನು ಫೋನ್‌ನಲ್ಲಿ ಮಾತನಾಡಿದ್ದು ಯಾವಾಗ ಅನ್ನೋದರ ಬಗ್ಗೆ ನನಗೆ ನೆನಪಿಲ್ಲ.. ಹತ್ತರಿಂದ ಹದಿನೈದು ದಿನಗಳಾಗಿರಬಹುದು ಎಂದೂ ದರ್ಶನ್‌ ಹೇಳಿದ್ದಾರೆ ಎನ್ನಲಾಗಿದೆ..

Share Post