Bengaluru

ರಕ್ತಪಾತಕ್ಕೆ ದಾರಿ ಮಾಡಿಕೊಡದಂತೆ ಹೆಚ್.ಡಿ.ಕುಮಾರಸ್ವಾಮಿ ಮನವಿ

ಬೆಂಗಳೂರು: ಹಿಜಾಬ್‌(Hijab) ವಿವಾದ ಪ್ರತಿಭಟನೆಗೆ ತಿರುಗುದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(Kumaraswamy) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು, ಇದು ಸಮಾಜಕ್ಕೆ ಒಳ್ಳೆಯದಲ್ಲ, ಸರ್ಕಾರ ಈ ಬಗ್ಗೆ ಗಮನ ಹಿರಿಸ ನಿಯಂತ್ರಣ ಮಾಡುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಕೆಲ ಸಂಘಟನೆಗಳಿಂದ ಪ್ರೇರೇಪಿತವಾಗಿ ಈ ರೀತಿ ಆಗ್ತಿದೆ. ಶಾಂತಿ ಕಾಪಾಡುವಂತೆ ಯುವಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ಮಕ್ಕಳಿಗೆ ಪೋಷಕರು ತಿಳಿಹೇಳುವ ಕೆಲಸ ಮಾಡಬೇಕು.  ನ್ಯಾಯಾಲಯದ(Court) ತೀರ್ಪಿಗೆ ಎಲ್ಲರೂ ಬದ್ದರಾಗಿರಬೇಕು. ರಕ್ತಪಾತಕ್ಕೆ ಅವಕಾಶ ಕೊಡದಂತೆ ಮನವಿ ಮಾಡಿಕೊಳ್ಳುತೇನೆ ಎಂದು ಬೆಂಗಳೂರುನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Share Post