Districts

ಮಹಿಳೆಯರ ಮೇಲೆ ಬಸ್‌ ಹತ್ತಿಸಲು ಹೊರಟ ಸರ್ಕಾರಿ ಬಸ್‌ ಚಾಲಕ..!

ತುಮಕೂರು; ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಉಚಿತ ಪ್ರಯಾಣ ವ್ಯವಸ್ಥೆ ಇರುವುದರಿಂದ ಮಹಿಳೆಯರು ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಅದೇ ರೀತಿ ಗೊರವನಹಳ್ಳಿಗೆ ಬಂದಿದ್ದ ಮಹಿಳೆಯರ ಮೇಲೆ ಸರ್ಕಾರಿ ಬಸ್‌ ಚಾಲಕನೊಬ್ಬ ಬಸ್‌ ಹತ್ತಿಸಲು ಹೋಗಿರುವ ಘಟನೆ ನಡೆದಿದೆ. ಕೊರಟಗೆರೆಯ ನಾಗೇನಹಳ್ಳಿ ಗೇಟ್‌ ಬಳಿ ಬಸ್‌ಗೆ ಕೈ ಅಡ್ಡ ಹಾಕಿದಾಗ ಈ ಘಟನೆ ನಡೆದಿದೆ.

ಉಚಿತ ಪ್ರಯಾಣದಿಂದ ಬರೀ ಮಹಿಳೆಯರೇ ಬಸ್‌ ಹತ್ತುತ್ತಿದ್ದಾರೆ. ಇದರಿಂದಾಗಿ ಟಿಕೆಟ್‌ ಕಲೆಕ್ಷನ್‌ ಆಗಿಲ್ಲ ಎಂದು ಬೇಸತ್ತಿದ್ದ ಡ್ರೈವರ್‌ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯರು ಕೊಳ್ಳೇಗಾಲದಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿದ ನಂತರ ಊರುಗೆ ಹೋಗಲು ಹೊರಟಿದ್ದ ಅವರು ನಾಗೇನಹಳ್ಳಿ ಬಳಿ ಬಸ್‌ಗೆ ಕೈ ಅಡ್ಡ ಹಾಕಿದ್ದಾರೆ. ಆ ವೇಳೆ ಚಾಲಕ ಅವರ ಮೇಲೇ ಬಸ್‌ ನುಗ್ಗಿಸಲು ಯತ್ನಿಸಿದ್ದಾನೆ.

ಚಾಲಕನ ವರ್ತನೆ ಬಗ್ಗೆ ಸ್ಥಳೀಯ ತಹಶಿಲ್ದಾರ್‌ಗೆ ದೂರು ನೀಡಲಾಗಿದೆ. ಚಾಲಕ ಮುನಿಶಮಿರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Share Post