CrimeDistricts

ಬೆಟ್ಟದಲ್ಲಿ ಪತ್ತೆಯಾಯ್ತು ಅಪರಿಚಿತ ಶವ; ದೇಹ ಕೆಳಗೆ ತರಲು ಪೊಲೀಸರ ಹರಸಾಹಸ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಬಳಿಯ ಆವಲಗುರ್ಕಿ ಸಮೋಪವಿರುವ ಆದಿಯೋಗಿ ಸನ್ನಿಧಾನಕ್ಕೆ ಹೊಂದಿಕೊಂಡಿರುವ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಬೆಟ್ಟದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು ಐವತ್ತು ವರ್ಷದ ವ್ಯಕ್ತಿ ಶವ ಇದಾಗಿದ್ದು, ಅದನ್ನು ಪೊಲೀಸರು ಹಾಗೂ ಸೈನಿಕರನ್ನು ಹೊತ್ತುಕೊಂಡು ಬರಲು ಹೆಣಗಾಡಿದ್ದಾರೆ.

ಬೆಟ್ಟದ ಬಳಿಯೇ ಸೈನಿಕರು ಕ್ಯಾಂಪ್‌ ಹಾಕಿದ್ದರು. ಈ ವೇಳೆ ಸೈನಿಕರೊಬ್ಬರಿಗೆ ಮೃತದೇಹ ಕಾಣಿಸಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಹಾಗೂ ಸೈನಿಕರು ಇಬ್ಬರೂ ಸೇರಿ ಸುಮಾರು ಐದಾರು ಕಿಲೋ ಮೀಟರ್‌ ದೂರದ ಬೆಟ್ಟ ಪ್ರದೇಶದಿಂದ ಮೃತದೇಹವನ್ನು ಹೊತ್ತುತಂದಿದ್ದಾರೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪಿಎಸ್‌ಐ ಪ್ರದೀಪ್ ಪೂಜಾರಿ ಹಾಗೂ ಅವರ ಸಿಬ್ಬಂದಿ ಹಾಗೂ ಸೈನಿಕರು ಐದಾರು ಕಿಲೋ ಮೀಟರ್‌ ನಡೆದ ಶವ ಕೆಳಗಡೆಗೆ ತಂದಿದ್ದಾರೆ. ಆದ್ರೆ ಆ ಮೃತದೇಹ ಯಾರದ್ದು ಅಲ್ಲಿಗೆ ಯಾಕೆ ಬಂತು, ಅದು ಕೊಲೆಯೋ ಆತ್ನಹತ್ಯೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

 

Share Post