CinemaCrime

ಆ ನಟ ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟ!; ನಟಿ ಅಳಲು!

ಹೈದರಾಬಾದ್‌; ಕಾಸ್ಟಿಂಗ್‌ ಕೌಚ್‌ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.. ಹಲವಾರು ನಟಿಯರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.. ಅದ್ರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ನಡೆದ ಕೆಟ್ಟ ಘಟನೆಗಳನ್ನು ನಟಿಯರು ಈಗ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.. ಈ ಬಗ್ಗೆ ನಟಿ ಮೀನು ಮುನೀರ್‌ ಎಂಬಾಕೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!

ನಾನು 2013ರಲ್ಲಿ ಒಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ ಸೆಟ್‌ನಲ್ಲಿ ಮುಖೇಶ್, ಮಣಿಯಂಪಿಲ ರಾಜು, ಇದ್ವೆಲ ಬಾಬು ಮತ್ತು ಜಯಸೂರ್ಯ ನನಗೆ ದೈಹಿಕವಾಗಿ ಸಾಕಷ್ಟು ಕಿರುಕುಳ ನೀಡಿದರು.. ಅವರು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕಾಗಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ನಟಿ ಮೀನು ಮುನೀರ್‌ ಆರೋಪ ಮಾಡಿದ್ದಾರೆ.. ಅವರೊಂದಿಗೆ ಸಹಕರಿಸಿದರೆ ಮಾತ್ರ ಚೆನ್ನಾಗಿ ವರ್ತನೆ ಮಾಡುತ್ತಾರೆ.. ಇಲ್ಲದಿದ್ದರೆ ಕಿರುಕುಳ ತಪ್ಪಿದ್ದಲ್ಲ. ಚಿತ್ರದ ಶೂಟಿಂಗ್‌ ವೇಳೆಯಲ್ಲಿ ನಾನು ವಿಶ್ರಾಂತಿ ಕಠಡಿಗೆ ಹೋಗಿದ್ದೆ.. ವಿಶ್ರಾಂತಿಯ ನಂತರ ನಾನು ಹೊರಬಂದಾಗ ಹಿಂದಿನ ಬಂದ ನಟ ಜಯಸೂರ್ಯ ನನ್ನ ಅನುಮತಿ ಇಲ್ಲದೆ ನನ್ನನ್ನು ಹಿಂದಿನಿಂದ ತಬ್ಬಿಕೊಂಡು ಮುತ್ತಿಟ್ಟ. ನಾನು ಅದರಿಂದ ಆಘಾತಗೊಂಡು ಓಡಿದೆ.. ಇದೇ ಕಾರಣಕ್ಕಾಗಿ ನಾನು ಮಲಯಾಳಂ ಚಿತ್ರರಂಗ ತೊರೆದು ಚೆನ್ನೈಗೆ ಹೋಗಬೇಕಾಯಿತು ಎಂದು ನಟಿ ಮೀನು ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದಾಗ ಭೀಕರ ಅಪಘಾತ; ಐವರ ದುರ್ಮರಣ!

Share Post