CrimeDistricts

ಹೊಂಡದಲ್ಲಿ ಈಜಲು ಹೋಗಿ ಮೂವರು ಮಕ್ಕಳು ದುರ್ಮರಣ!

ಹಾಸನ; ನೀರಿನ ಹೊಂಡದಲ್ಲಿ ಈಜಲು ಹೋಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.. ಹಾಸನ ಬೇಲೂರು ತಾಲ್ಲೂಕಿನ ಸರಸೀಪುರ ಗ್ರಾಮದ ಹೊರವಲಯದ ಹೊಂಡದಲ್ಲಿ ಈ ದುರ್ಘಟನೆ ನಡೆದಿದೆ..

ಬೇಸಿಗೆ ರಜೆ ಇರುವುದರಿಂದ ಮಕ್ಕಳು ನೀರಿನಲ್ಲಿ ಆಟ ಆಡಲು ಹೋಗುತ್ತಾರೆ.. ಈ ವೇಳೆ ಪೋಷಕರು ಹತ್ತಿರವಿದ್ದರೆ ಒಳ್ಳೆಯದು.. ಆದ್ರೆ ಪೋಷಕರಿಗೆ ತಿಳಿಯದಂತೆ ಹೋಗುವ ಮಕ್ಕಳು ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ.. ದೀಕ್ಷಿತ್ (10), ನಿತ್ಯಶ್ರೀ (12), ಕುಸುಮ (6) ಮೃತ ದುರ್ದೈವಿಗಳಾಗಿದ್ದಾರೆ..

ಈ ಮೂವರು ಮಕ್ಕಳೂ ದನಗಳನ್ನು ಮೇಯಿಸುತ್ತಿದ್ದರು.. ಹೊಂಡದ ಬಳಿಯೇ ದನಗಳನ್ನು ಕಟ್ಟಿದ್ದ ಮಕ್ಕಳು ಹೊಂಡದ ನೀರಿನಲ್ಲಿ ಆಟ ಆಡಲು ಹೋಗಿದ್ದಾರೆ.. ಈ ವೇಳೆ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.. ಮೂವರು ಪುಟ್ಟ ಮಕ್ಕಳಾಗಿದ್ದರಿಂದ ಯಾರಿಗೂ ಈಜು ಬರುತ್ತಿರಲಿಲ್ಲ.. ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಗಿದೆ..

Share Post