CrimeDistricts

ಪಾರಿವಾಳ ಉಳಿಸಲು ಹೋಗಿ ವಿದ್ಯುತ್‌ ತಂತಿಗೆ ಸಿಲುಕಿ 12 ವರ್ಷದ ಬಾಲಕ ಸಾವು!

ಚಿತ್ರದುರ್ಗ; ಪಾರಿವಾಳದ ಪ್ರಾಣವನ್ನು ಉಳಿಸಲು ಹೋದ 12 ವರ್ಷದ ಬಾಲಕ ವಿದ್ಯುತ್‌ ತಂತಿಗೆ ಸಿಲುಕಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಸಂತೇಗುಡ್ಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹನುಮಾಪುರದಲ್ಲಿ ಈ ಘಟನೆ ನಡೆದಿದೆ.. 12 ವರ್ಷದ ಬಾಲಕ ರಾಮಚಂದ್ರ ಎಂಬಾತನೇ ದಾರುಣವಾಗಿ ಸಾವನ್ನಪ್ಪಿದವನಾಗಿದ್ದಾನೆ..
ಆರನೇ ತರಗತಿ ಓದುತ್ತಿದ್ದ ರಾಮಚಂದ್ರ ಪಾರಿವಾಳವೊಂದು ವಿದ್ಯುತ್‌ ತಂತಿಗೆ ಸಿಲುಕು ನರಳಾಡುತ್ತಿದ್ದುದನ್ನು ನೋಡಿದ್ದಾನೆ.. ಕೂಡಲೇ ಆತ ಪಾರಿವಾಳದ ರಕ್ಷಣೆ ಮಾಡಲು ವಿದ್ಯುತ್‌ ಕಂಬ ಏರಿಬಿಟ್ಟಿದ್ದಾರೆ.. ಚಿಕ್ಕ ಹುಡುಗನಾಗಿದ್ದರಿಂದ ವಿದ್ಯುತ್‌ ಶಾಕ್‌ ಹೊಡೆದು ಸಾಯುತ್ತೇನೆ ಅನ್ನೋದು ಆತನಿಗೂ ಗೊತ್ತಿರಲಿಲ್ಲ.. ಪಾರಿವಾಳದ ಪ್ರಾಣ ಉಳಿಸಬಹುದು ಎಂದು ಹೋದವನು, ತಾನೂ ವಿದ್ಯುತ್‌ ತಂತಿಗೆ ಸಿಲುಕಿದ್ದಾನೆ.. ಕಂಬದಲ್ಲೇ ಒದ್ದಾಡಿ ಒದ್ದಾಡಿ ಸಾವನ್ನಪ್ಪಿದ್ದಾನೆ..
ರಾಮಚಂದ್ರನ ಮೃತದೇಹ ಕಂಬದಲ್ಲೇ ನೇತಾಡುತ್ತಿತ್ತು.. ಇದನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅನಂತರ ವಿದ್ಯುತ್‌ ಇಲಾಖೆಯವರು ವಿದ್ಯುತ್‌ ಆಫ್‌ ಮಾಡಿ, ಬಾಲಕ ದೇಹ ಕೆಳಗಿಸಿದ್ದಾರೆ.. ರಾಂಪುರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ..

Share Post