CrimeDistricts

ಯುವತಿ ಜೊತೆ ಓಡಿಹೋದ ಯುವಕ; ಸೋದರಮಾವನ ಅರೆಬೆತ್ತಲೆ ಮಾಡಿ ಹಲ್ಲೆ!

ಹಾವೇರಿ; ಬೆಳಗಾವಿ ತಾಲ್ಲೂಕಿನಲ್ಲಿ ನಡೆದ ಅಮಾನವೀಯ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಮಗ ಯುವತಿಯೊಂದಿಗೆ ಓಡಿಹೋದ ಅನ್ನೋ ಕಾರಣಕ್ಕೆ ತಾಯಿಯನ್ನು ಯುವತಿಯ ಕಡೆಯವರು ಬೆತ್ತಲೆ ಮಾಡಿ ಮೆರವಣೀಗೆ ಮಾಡಿದ್ದರು. ಈ ಘಟನೆ ಇನ್ನೂ ಹಸಿರಾಗಿರುವಾಗಲೇ ಹಾವೇರಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಇಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಹೀಗಾಗಿ ಯುವಕನ ಸೋದರ ಮಾವನನ್ನು ಹಿಡಿದು ಅರೆಬೆತ್ತಲೆ ಮಾಡಿ ಥಳಿಸಲಾಗಿದೆ. 

ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ. ಇದೇ ಮುದೇನೂರು ಗ್ರಾಮದ ಯುವಕನೊಬ್ಬ ಚಳಗೇರಿ ಗ್ರಾಮದ ಯುವತಿಯೊಂದಿಗೆ ಓಡಿಹೋಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿಯ ಕಡೆಯವರು ಯುವಕನ ಸೋದರ ಮಾವನ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಯುವಕನ ಸೋದರ ಮಾವ ಪ್ರಶಾಂತ್‌ ಎಂಬಾತನನ್ನು ಹೊತ್ತು ತಂದು ರಾಣೆಬೆನ್ನೂರು ಗ್ರಾಮೀಣ ಠಾಣೆಯ ಎದುರೇ ಅರೆಬೆತ್ತಲೆ ಮಾಡಿ ಹಲ್ಲೆ ಮಾಡಲಾಗಿದೆ.

 

Share Post