CrimeDistricts

ಟೆರರಿಸ್ಟ್‌ ಆಗ್ತೇನೆ ಅಂತ ತಹಸೀಲ್ದಾರ್‌ ಜೀಪ್‌ಗೆ ಬೆಂಕಿ ಇಟ್ಟ ಯುವಕ!

ಚಿತ್ರದುರ್ಗ; ಕೆಲ ಯುವಕರು ಇತ್ತೀಚೆಗೆ ವಿಚಿತ್ರವಾಗಿ ಆಡೋದಕ್ಕೆ ಶುರು ಮಾಡಿದ್ದಾರೆ.. ಇದಕ್ಕೆ ಉದಾಹರಣೆಯೇ ಈ ಸ್ಟೋರಿ.. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಕಚೇರಿ ಬಳಿ ನಿಲ್ಲಿಸಿದ್ದ ತಹಸೀಲ್ದಾರ್‌ ಜೀಪ್‌ಗೆ ಯುವಕನೋರ್ವ ಬೆಂಕಿ ಹಚ್ಚಿದ್ದಾನೆ.. ನಾನು ಉಗ್ರಗಾಮಿ ಆಗುತ್ತೇನೆ.. ನನ್ನನ್ನು ಕೊಲೆ ಆರೋಪಿ ದರ್ಶನ್‌ ಇರುವ ಸೆಲ್‌ನ ಪಕ್ಕದ ಸೆಲ್‌ನಲ್ಲಿ ಹಾಕಿ ಎಂದು ಆತ ಹೇಳಿಕೊಂಡಿದ್ದಾನೆ..
ಚಳ್ಳಕೆರೆಯ ಗಾಂಧಿನಗರದವನಾದ ಪೃಥ್ವಿರಾಜ್‌ ಈ ಕೆಲಸ ಮಾಡಿದ ಯುವಕನಾಗಿದ್ದಾನೆ.. ಇದೇ ಯುವಕ ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದ ಬಳಿಗೆ ಬಂದು ತನ್ನ ಬೈಕ್‌ಗೆ ಬೆಂಕಿ ಹಚ್ಚಿದ್ದನು.. ಆಗ ಪೊಲೀಸರು ಬುದ್ಧವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು.. ಇದೀಗ ಅದೇ ಯುವಕ ತಹಸೀಲ್ದಾರ್‌ ಕಾರಿಗೇ ಬೆಂಕಿ ಹಚ್ಚಿದ್ದಾನೆ.. ನನ್ನ ತಾಯಿ ದೂರು ಕೊಡಲು ಹೋದಾಗ ನನ್ನ ತಾಯಿಯನ್ನು ಪೊಲೀಸರು ನಿಂದಿಸಿದ್ದಾರೆ ಎಂದು ಆರೋಪ ಮಾಡುವ ಈ ಯುವಕ ವಿಚಿತ್ರವಾಗಿ ಆಡಲು ಶುರು ಮಾಡಿದ್ದಾನೆ..
ನನ್ನ ತಾಯಿಯನ್ನು ನಿಂದಿಸಿದ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.. ಹೀಗಾಗಿ ನಾನು ಟೆರರಿಸ್ಟ್‌ ಆಗುತ್ತೇನೆ.. ದರ್ಶನ್‌ ಪಕ್ಕದ ಸೆಲ್‌ನಲ್ಲಿ ನನ್ನನ್ನು ಹಾಕಿ ಎಂದು ಯುವಕ ಆಕ್ರೋಶ ಹೊರಹಾಕಿದ್ದಾನೆ.. ಇದೀಗ ಆರೋಪಿ ಪೊಲೀಸರ ವಶದಲ್ಲಿದ್ದಾನೆ..

Share Post