Districts

ನಾನು ಸಚಿವರ ವಿರುದ್ಧ ದೂರು ಕೊಡಲ್ಲ, ನನಗೆ ಅಸಮಾಧಾನವಿಲ್ಲ; ಯತ್ನಾಳ್‌ ಅಚ್ಚರಿ ಹೇಳಿಕೆ

ವಿಜಯಪುರ; ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯ ದೂರು ಕೊಟ್ಟಿರುವುದು ಅವರ ವೈಯಕ್ತಿಕ. ಆದರೆ ನಾನು ಯಾವ ಸಚಿವರ ವಿರುದ್ಧವೂ ದೂರು ಕೊಡುವುದಿಲ್ಲ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ರೇಣುಕಾಚಾರ್ಯ ಅವರು ಹೈಕಮಾಂಡ್‌ಗೆ ಸಚಿವರ ವಿರುದ್ಧ ದೂರು ನೀಡಿರುವುದಕ್ಕೆ ಯತ್ನಾಳ್‌ ಪ್ರತಿಕ್ರಿಯೆ ನೀಡಿದರು.

ರೇಣುಕಾಚಾರ್ಯ ದೂರು ನೀಡಿರುವುದು ಅವರ ವೈಯಕ್ತಿಕ. ಆದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಜೊತೆ ಎಲ್ಲಾ ಸಚಿವರೂ ಚೆನ್ನಾಗಿಯೇ ಇದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಎಲ್ಲಾ ಸಚಿವರೂ ಸಹಕಾರ ನೀಡುತ್ತಿದ್ದಾರೆ. ನಾನು ಮಾತನಾಡಲು ಹೋದಾಗ ಗೌರವ ಕೊಟ್ಟಿದ್ದಾರೆ. ಹೀಗಾಗಿ ನಾನು ಯಾರ ವಿರುದ್ಧವೂ ಮಾತನಾಡುವುದಿಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

೧೨೫ ಕೋಟಿ ರೂಪಾಯಿ ಅನುದಾನ ಬಹಿಂಪಡೆದಾಗ ಮಾತನಾಡಿದ್ದೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಎಲ್ಲಾ ಸಚಿವರೂ ನನ್ನ ಜೊತೆ ಸಹಕರಿಸುತ್ತಿದ್ದಾರೆ. ಹೀಗಾಗಿ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಯತ್ನಾಳ್‌ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

 

 

Share Post