BengaluruCrime

ವಾಕಿಂಗ್‌ ಮಾಡುತ್ತಿದ್ದ ಮಹಿಳೆಯನ್ನು ಬಲವಂತವಾಗಿ ಚುಂಬಿಸಿದ ಆಗಂತುಕ!

ಬೆಂಗಳೂರು; ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ದುಷ್ಕರ್ಮಿಯೊಬ್ಬ ವಾಕ್‌ ಮಾಡಲು ಹೊರಟಿದ್ದ ಮಹಿಳೆಯನ್ನು ಹಿಡಿದು ಬಲವಂತವಾಗಿ ಚುಂಬಿಸಿದ್ದಾನೆ.. ಮುಂಜಾನೆ 5 ಗಂಟೆ ಸುಮಾರಿಗೆ ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; ಒಂದು ಸಣ್ಣ ರಕ್ತ ಪರೀಕ್ಷೆಯಿಂದ ಪುರುಷರ ಬಂಜೆತನ ಗುರುತಿಸಬಹುದು!

ಮಹಿಳೆಯೊಬ್ಬರು ವಾಕ್‌ ಮಾಡೋದಕ್ಕೆ ಹೊರಗೆ ಬಂದಿದ್ದಳು.. ಈ ವೇಳೆ ದುಷ್ಕರ್ಮಿಯೊಬ್ಬ ಅಲ್ಲಿಗೆ ಬಂದು ಆಕೆಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ.. ಆಗ ಆಕೆ ತಪ್ಪಿಸಿಕೊಂಡು ಓಡಿ ಬರುತ್ತಾಳೆ.. ಆಕೆಯನ್ನು ಹಿಂಬಾಲಿಸಿದ ದುಷ್ಕರ್ಮಿ, ಆಕೆಯನ್ನು ಹಿಡಿದು ಚುಂಬಿಸಿ ಪರಾರಿಯಾಗುತ್ತಾನೆ..

ಇದನ್ನೂ ಓದಿ; ಮಂಡ್ಯದ ಈ ಬಾಲಕ ಸಾಯಿಬಾಬಾ ಮೂರನೇ ಅವತಾರವಂತೆ!

ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಸಂತ್ರಸ್ತೆಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ..

Share Post