CrimeHealth

ಬಯಲು ಶೌಚಕ್ಕೆ ಕೂತಿದ್ದ ವೃದ್ಧನ ಮರ್ಮಾಂಗ ಕಚ್ಚಿಕೊಂಡುಹೋದ ಮೊಸಳೆ!

ಲಖನೌ; ಕಾಲುವೆ ಬಳಿ ಬಯಲು ಶೌಚ ಮಾಡುತ್ತಿದ್ದ ವೃದ್ಧನೊಬ್ಬನ ಮೇಲೆ ಮೊಸಳೆಯೊಂದು ದಾಳಿ ಮಾಡಿದ್ದು, ಆತನ ಮರ್ಮಾಂಗವನ್ನು ಕಚ್ಚಿಕೊಂಡು ಹೋಗಿದೆ.. ಉತ್ತರ ಪ್ರದೇಶದ ಕುಶಿನಗರದಲ್ಲಿ ಈ ಘಟನೆ ನಡೆದಿದೆ.. ಇಲ್ಲಿ ಬುಧ್ವಾ ಅರಣ್ಯ ಪ್ರದೇಶದ ಗಂಡಕ್‌ ಕಾಲುವೆ ಬಳಿ ವೃದ್ಧನೊಬ್ಬ ಶೌಚ ಮಾಡುತ್ತಿದ್ದಾಗ, ಕಾಲುವೆಯಲ್ಲಿದ್ದ ಮೊಸಳೆ ದಾಳಿ ಮಾಡಿದೆ..

ಇದನ್ನೂ ಓದಿ;ತುಪ್ಪದ ಅಸಲೀತನದ ಪರೀಕ್ಷೆ ಮಾಡುವುದು ಹೇಗೆ..?

ಶೌಚಕ್ಕೆ ಕುಳಿತಿದ್ದಾಗ ಮೊಸಳೆಯೊಂದು ಹತ್ತಿರ ಬಂದಿದೆ.. ಇದನ್ನು ಗಾಬರಿಯಿಂದ ವೃದ್ಧ ಮೇಲೆದ್ದಿದ್ದಾನೆ.. ಅಷ್ಟರಲ್ಲಿ ಬಾಯಿ ಹಾಕಿದ ಮೊಸಳೆಗೆ ವೃದ್ಧನ ಮರ್ಮಾಂಗ ಸಿಕ್ಕಿದೆ.. ಅದನ್ನು ಕಚ್ಚಿಕೊಂಡು ಹೋಗಿದೆ.. ಇದರಿಂದ ರಕ್ತಸ್ರಾವದಿಂದ ವೃದ್ಧಿ ಜೋರಾಗಿ ಕಿರುಚಿಕೊಂಡಿದ್ದಾನೆ.. ಕೂಡಲೇ ಹತ್ತಿರದಲ್ಲಿದ್ದವರು ಬಂದು ವೃದ್ಧನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.. ಗೋರಖ್‌ಪುರದ ಆಸ್ಪತ್ರೆಯಲ್ಲಿ ವೃದ್ಧ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಸತೀಶ್‌ ಜಾರಕಿಹೊಳಿ-ಹೆಚ್ಡಿಕೆ ರಹಸ್ಯ ಭೇಟಿ; ದೆಹಲಿಯಲ್ಲಿ ಆ 1 ಗಂಟೆ ಮೀಟಿಂಗ್‌ ರಹಸ್ಯವೇನು..?

ಈ ಹಿಂದೆ ಅಂದರೆ ವಾರದ ಹಿಂದೆ ಕೂಡಾ ಉತ್ತರಪ್ರದೇಶದ ನದಿಯೊಂದರಲ್ಲಿ ಯುವಕನೊಬ್ಬ ಸ್ನಾನ ಮಾಡುತ್ತಿದ್ದಾಗ ದಾಳಿ ಮಾಡಿದ ಮೊಸಳೆ ಆತನನ್ನು ಸಾಯಿಸಿ ತಿಂದಿತ್ತು.. ಇದೀಗ ಮತ್ತೆ ಇಂತಹದ್ದೇ ಒಂದು ಘಟನೆ ನಡೆದಿದೆ.. ಹೀಗಾಗಿ, ನದಿ ದಡಗಳಲ್ಲಿಗೆ ಹೋಗಬೇಡಿ ಎಂದು ಉತ್ತರ ಪ್ರದೇಶದ ಸರ್ಕಾರ ಮನವಿ ಮಾಡಿದೆ..

Share Post