CrimeDistricts

ಗೃಹಲಕ್ಷ್ಮೀ ಹಣ ಡ್ರಾ ಮಾಡಲು ಹೋಗಿದ್ದ ಮಹಿಳೆಯ ಕೊಲೆ!

ದಾವಣಗೆರೆ; ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಡ್ರಾ ಮಾಡಿಕೊಂಡು ಬರಲು ಹೋಗಿದ್ದ ಮಹಿಳೆ ಹತ್ಯೆಯಾಗಿದ್ದಾಳೆ.. ಗಂಡನೇ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಸತ್ಯಮ್ಮ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಈಕೆ ಅಣ್ಣಪ್ಪ ಎಂಬುವವನನ್ನು 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.. ಆದ್ರೆ ಗಂಡ ನಿತ್ಯ ಕುಡಿದುಬಂದು ಕಿರುಕುಳ ನೀಡುತ್ತಿದ್ದ.. ಇದರಿಂದ ಬೇಸತ್ತ ಸತ್ಯಮ್ಮ ತವರು ಮನೆ ಸೇರಿದ್ದಳು.. ಗೃಹಲಕ್ಷ್ಮೀ ಯೋಜನೆ ಹಣ ಬ್ಯಾಂಕ್‌ಗೆ ಬಂದಿದ್ದರಿಂದ ಅದನ್ನು ಡ್ರಾ ಮಾಡಿಕೊಂಡು ಬರಲು ಆಕೆ ಹೋಗಿದ್ದಳು.. ಒಡೆರಹಳ್ಳಿ ಗ್ರಾಮಕ್ಕೆ ಬಂದಿದ್ದಾಗ, ಗಂಡ ಅಣ್ನಪ್ಪ ಆಕೆಯನ್ನು ನೋಡಿದ್ದಾನೆ.. ಜಗಳೂರು ತಾಲೂಕಿನ ಅಸಗೋಡ್​​ ಬ್ಯಾಂಕ್​​ಗೆ ಬಂದಿದ್ದಾಗ ಅಲ್ಲಿಗೆ ಬಂದ ಪತಿ ಅಣ್ಣಪ್ಪ ಪತ್ನಿ ಸತ್ಯಮ್ಮಳನ್ನ ಮನವೊಲಿಸಿ ಜಮೀನಿಗೆ ಕರೆದೊಯ್ದಿದ್ದಾನೆ.. ಅಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.. ನಂತರ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ..

Share Post