BengaluruCrime

3 ವರ್ಷದ ಮಗುವನ್ನು ಕೊಂದು ಆಸ್ಪತ್ರೆ ತಂದು ನಾಟಕವಾಡಿದ ಮಹಾತಾಯಿ!

ಬೆಂಗಳೂರು; ಮಹಿಳೆಯೊಬ್ಬರು ತನ್ನ ಮೂರು ವರ್ಷ ಹತ್ತು ತಿಂಗಳ ಹೆಣ್ಣು ಮಗುವನ್ನು ಕೊಂದು, ಆಸ್ಪತ್ರೆಗೆ ತಂದು ನಾಟಕ ಆಡಿದ್ದಾಳೆ.. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದೆ.. ವೇಲ್‌ನಿಂದ ಕುತ್ತಿಗೆ ಬಿಗಿದು ಸಾಯಿಸಲಾಗಿದ್ದು, ನಂತರ ಮಗು ಮಾತನಾಡುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗೆ ತಂದಿದ್ದಳು.. ವೈದ್ಯರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ..

35 ವರ್ಷದ ರಮ್ಯಾ ಎಂಬಾಕೆಯೇ ತನ್ನ ಮಗುವನ್ನು ಕೊಂದ ಪಾಪಿ.. ರಮ್ಯಾ ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ನಾರ್ವೆನಲ್ಲಿ ಕೆಲಸ ಮಾಡುತ್ತಾರೆ.. ರಮ್ಯಾ  ತನ್ನ ಅತ್ತೆ, ಮಾವನ ಜೊತೆ ವಾಜರಹಳ್ಳಿಯಲ್ಲಿ ವಾಸವಿದ್ದಾಳೆ.. ಇವರಿಗೆ ಅವಳಿ ಹೆಣ್ಣು ಮಕ್ಕಳಿದ್ದವು.. ಅದರಲ್ಲಿ ಒಂದು ಮಗು ಪ್ರೀತಿಕಾ ಎಂಬ ಮಗು ಮಾನಸಿಕ ಅಸ್ವಸ್ಥಳಾಗಿದ್ದಳು.. ಹೀಗಾಗಿ ಆಕೆಯನ್ನು ನೋಡಿಕೊಳ್ಳುವುದು ಕಷ್ಟವಾಗಿ ವೇಲ್‌ನಿಂದ ಕುತ್ತಿಗೆ ಬಿಗಿದು ಸಾಯಿಸಿದ್ದಾಳೆ..

ಮಗು ಮೃತಪಟ್ಟ ನಂತರ, ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ತಂದ ರಮ್ಯಾ, ಮಗು ಎದ್ದೇಳುತ್ತಿಲ್ಲ.. ಏನಾಗಿದೆ ಗೊತ್ತಾಗುತ್ತಿಲ್ಲ ಎಂದು ನಾಟಕವಾಡಿದ್ದಾಳೆ.. ಪರೀಕ್ಷೆ ಮಾಡಿದ ವೈದ್ಯರಿಗೆ ಅನುಮಾನ ಬಂದಿದ್ದು, ವೈದ್ಯರು ಪೊಲೀಸರನ್ನು ಕರೆಸಿದ್ದಾರೆ.. ಪೊಲೀಸರು ರಮ್ಯಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಗುವನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ..

 

 

 

 

Share Post