Crime

ತಾಯಿಯ ಕಣ್ಣೆದುರೇ ಲಾರಿಯಡಿ ಸಿಲುಕಿ ಮಗು ಸಾವು

ಬೆಂಗಳೂರು; ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವುದಕ್ಕೂ ಪುತುಸೊತ್ತು ಇಲ್ಲವೇನೋ ಅನಿಸಿಬಿಡುತ್ತೆ.. ಪುಟಾಣಿ ಮಕ್ಕಳು ಬೀದಿಗೆ ಬಿಟ್ಟು ಮೈಮರೆತುಬಿಟ್ಟಿರುತ್ತಾರೆ.. ಈ ಮಾತು ಯಾಕೆ ಹೇಳ್ತಿದೀವಿ ಅಂದ್ರೆ, ಪೋಷಕರು ಸ್ವಲ್ಪ ಯಾಮಾರಿದ್ದರಿಂದ ನಾಲ್ಕು ವರ್ಷದ ಮಗು ಪ್ರಾಣ ಕಳೆದುಕೊಂಡಿದೆ.

   ಬೆಂಗಳೂರಿನ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.. ನಿನ್ನೆ ಸಂಜೆ ಈ ಘಟನೆ ನಡೆದಿದೆ.. ಕೆಲಸ ಅರಸಿ ಉತ್ತರ ಭಾರತದಿಂದ ಕುಟುಂಬವೊಂದು ರಾಮೋಹಳ್ಳಿಯಲ್ಲಿ ನೆಲೆಸಿದೆ. ನಿನ್ನೆ ಸಂಜೆ ತಾಯಿ‌ ತನ್ನ ಮಕ್ಕಳೊಂದಿಗೆ ಬಸ್ ಸ್ಟಾಪ್ ಬಳಿ ಬಂದಿದ್ದರು. ಈ ವೇಳೆ 4 ವರ್ಷದ ಆಯುಷ್ಯ ರಸ್ತೆಗೆ ಹೋಗಿದ್ದು ಇದೇ ವೇಳೆ ಬಂದ ಲಾರಿಯೊಂದು ಮಗು ಮೇಲೆ‌ ಹರಿದಿದೆ.

ಲಾರಿ‌ ಬಸ್ಸೊಂದರ ಓವರ್ ಟೇಕ್ ಮಾಡುತ್ತಿತ್ತು. ಇದೇ ವೇಳೆ ಮಗು ರಸ್ತೆಗೆ ನುಗ್ಗಿದೆ. ಇದರಿಂದಾಗಿ ತಾಯಿಯ ಕಣ್ಣ ಮುಂದೆಯೇ ಮಗು ಪ್ರಾಣ ಕಳೆದುಕೊಂಡಿದೆ. ಸ್ಥಳೀಯರು ಲಾರಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

Share Post