CrimeDistricts

ಹಾವೇರಿ ಅಪಘಾತದಲ್ಲಿ ರಾಷ್ಟ್ರೀಯ ಅಂಧರ ಫುಟ್ಬಾಲ್‌ ತಂಡದ ನಾಯಕಿಯೂ ಸಾವು!

ಶಿವಮೊಗ್ಗ; ಹಾವೇರಿ ಬಳಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು, ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ್ದರು.. ಇದರಲ್ಲಿ IAS ಅಧಿಕಾರಿ ಆಗುವ ಕನಸು ಕಂಡಿದ್ದ ಯುವತಿ ಕೂಡಾ ಸಾವನ್ನಪ್ಪಿದ್ದಾಳೆ.. ದೃಷ್ಟಿದೋಷವಿದ್ದ ಮಾನಸ ಎಂಬಾಕೆ, ರಾಷ್ಟ್ರೀಯ ಅಂಧರ ಫುಟ್ಬಾಲ್‌ನಲ್ಲಿ ಭಾರತ ತಂಡದ ನಾಯಕಿಯಾಗಿ ಆಟವಾಡಿ, ಪ್ರಶಸ್ತಿಗಳನ್ನು ಗೆದ್ದಿದ್ದಳು ಎಂದು ತಿಳಿದುಬಂದಿದೆ.

MSc ಮಾಡಿದ್ದ ಮಾನಸ ಬೆಂಗಳೂರಿನಲ್ಲಿ IAS ಕೋಚಿಂಗ್‌ ಪಡೆಯುತ್ತಿದ್ದಳು.. ಮನೆಯವರು ಸವದತ್ತಿಗೆ ಹೋಗುತ್ತಾರೆ ಎಂದು ತಿಳಿದು ಈಕೆ ಕೂಡಾ ಹೋಗಿದ್ದರು.. ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವಾಗ ದುರಂತ ನಡೆದುಹೋಗಿದೆ.. ಇದರಲ್ಲಿ ಮಾಸನ ಕೂಡಾ ಸಾವನ್ನಪ್ಪಿದ್ದಾಳೆ.. ಮಾನಸ ಹುಟ್ಟತ್ತಲೇ ದೃಷ್ಟಿ ಕಳೆದುಕೊಂಡಿದ್ದು, ಅಂಧರ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕಿಯಾಗಿದ್ದಳು. ಇದರ ಜೊತೆಗೆ ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಂದಿದ್ದಳು.

ಕರ್ನಾಟಕದ ಅಂಧರ ಬಾಲಕಿಯರ ಕ್ರಿಕೆಟ್ ತಂಡವನ್ನು ಕೂಡಾ ಮಾನಸ ಪ್ರತಿನಿಧಿಸಿದ್ದಳು ಎಂದು ತಿಳಿದುಬಂದಿದೆ.. ಮಾನಸಳನ್ನು ಕಳೆದುಕೊಂಡು ತಾತಿ ಭಾಗ್ಯಮ್ಮ ಹಾಗೂ ಸಹೋದರಿ ಮಹಾಲಕ್ಷ್ಮೀ ಕಣ್ಣೀರಿಡುತ್ತಿದ್ದಾರೆ..

 

Share Post