CrimeDistricts

ಬೆಳಗಾವಿ ಬಳಿ ಭೀಕರ ಅಪಘಾತ!; ನಾಲ್ವರ ದುರ್ಮರಣ!

ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಸರಣಿ ಅಪಘಾತ ನಡೆದಿದೆ.. ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.. ನಿಪ್ಪಾಣಿ ಸಮೀಪ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದು, ಈ ದುರಂತಕ್ಕೆ ಕಾರಣವಾಗಿದೆ..
ಜಬೀನ್‌ ಮಹಮದ್‌ ಹುಸೇನ್‌, ಸಂತೋಷ್‌ ಗಣಪತಿ ಮಾನೆ ಎಂಬವವರು ಸ್ಥಳದಲ್ಲೇ ಮೃತಪಟ್ಟಿದ್ದರು.. ದಿಲ್ದಾರ್‌ ಆದಿಲ್‌ ಶಾ ಹಾಗೂ ರೇಝಾ ಸಂಜು ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.. ಕೊಲ್ಲಾಪುರದ ಆಸ್ಪತ್ರೆಯಲ್ಲಿ ಈ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಹಲವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
ಎಂಟು ವರ್ಷದ ನೂಸುರಾ ಅಯಾಜ್‌, 20 ವರ್ಷ ಸಾನಿಯಾ ನಿಯಾಜ್‌, 52 ವರ್ಷದ ಮಂಜುನಾಥ್‌ ದತ್ತಾತ್ರೇಯ, 51 ವರ್ಷದ ಫರ್ವೀನ್‌ ತೀವ್ರವಾಗಿ ಗಾಯಗೊಂಡಿದ್ದಾರೆ.. ಕೆಲವರು ಕೈಕಾಲು ಮೂಳೆಗಳು ಮುರಿದಿವೆ.. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠ ಗುಳೇದ ಹಾಗೂ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Post