BengaluruCrime

ಯುವಕನ ಬೆತ್ತಲೆ ಮಾಡಿ ಅಟ್ಟಾಡಿಸಿ ಹೊಡೆದ ರೌಡಿಶೀಟರ್‌!

ಬೆಂಗಳೂರು; ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಿ, ಬಟ್ಟೆ ಬಿಚ್ಚಿಸಿ ರಸ್ತೆಗಳಲ್ಲಿ ಬೆತ್ತಲೆಯಾಗಿ ಅಟ್ಟಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ರೌಡಿ ಶೀಟರ್‌ ಪವನ್‌ ಅಲಿಯಾಸ್‌ ಕಡುಬು ಗ್ಯಾಂಗ್‌ ಈ ಕೃತ್ಯ ಎಸಗಿದೆ.. ಇದೀಗ ಈ ವಿಡಿಯೋ ವೈರಲ್‌ ಆಗುತ್ತಿದ್ದು, ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ..
ಸುಂಕದಕಟ್ಟೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.. ವ್ಯಕ್ತಿಯ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದ್ದು, ಆತನನ್ನು ಬೆತ್ತಲೆ ಮಾಡಿ ಅಟ್ಟಾಡಿ ಹೊಡೆಯಲಾಗಿದೆ.. ಸದ್ಯ ಆರೋಪಿ ಪವನ್‌ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಆರೋಪಿ ಪವನ್‌ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ಈ ಹಿಂದೆ ದಾಖಲಾಗಿದ್ದವು.. ಈ ಕಾರಣಕ್ಕಾಗಿ ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಓಪನ್‌ ಮಾಡಲಾಗಿತ್ತು.. ಇದೀಗ ಆತ ಸುಂಕದಕಟ್ಟೆಯಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಆರೋಪಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ..
ಬೆಳಗಾವಿ ಬಳಿ ಭೀಕರ ಅಪಘಾತ!; ನಾಲ್ವರ ದುರ್ಮರಣ!
ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಸರಣಿ ಅಪಘಾತ ನಡೆದಿದೆ.. ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.. ನಿಪ್ಪಾಣಿ ಸಮೀಪ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದು, ಈ ದುರಂತಕ್ಕೆ ಕಾರಣವಾಗಿದೆ..
ಜಬೀನ್‌ ಮಹಮದ್‌ ಹುಸೇನ್‌, ಸಂತೋಷ್‌ ಗಣಪತಿ ಮಾನೆ ಎಂಬವವರು ಸ್ಥಳದಲ್ಲೇ ಮೃತಪಟ್ಟಿದ್ದರು.. ದಿಲ್ದಾರ್‌ ಆದಿಲ್‌ ಶಾ ಹಾಗೂ ರೇಝಾ ಸಂಜು ಎಂಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.. ಕೊಲ್ಲಾಪುರದ ಆಸ್ಪತ್ರೆಯಲ್ಲಿ ಈ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಹಲವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ..
ಎಂಟು ವರ್ಷದ ನೂಸುರಾ ಅಯಾಜ್‌, 20 ವರ್ಷ ಸಾನಿಯಾ ನಿಯಾಜ್‌, 52 ವರ್ಷದ ಮಂಜುನಾಥ್‌ ದತ್ತಾತ್ರೇಯ, 51 ವರ್ಷದ ಫರ್ವೀನ್‌ ತೀವ್ರವಾಗಿ ಗಾಯಗೊಂಡಿದ್ದಾರೆ.. ಕೆಲವರು ಕೈಕಾಲು ಮೂಳೆಗಳು ಮುರಿದಿವೆ.. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠ ಗುಳೇದ ಹಾಗೂ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆಯಲ್ಲಿ ಸತ್ತವನಂತೆ ಬಿಳಿ ಬಟ್ಟೆ ಒದ್ದು ಮಲಗಿದ್ದ!
ನವದೆಹಲಿ; ರೀಲ್ಸ್‌ ಹುಚ್ಚು ಏನೇನೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.. ಯುವಕನೊಬ್ಬ ನಡು ರಸ್ತೆಯಲ್ಲಿ ಬಿಳಿ ಬಟ್ಟೆ ಹೊದ್ದುಕೊಂಡು, ಮೂಗಿನಲ್ಲಿ ಹತ್ತಿ ಇಟ್ಟುಕೊಂಡು ಮಲಗಿದ್ದಾನೆ.. ಸತ್ತವನಂತೆ ಮಲಗಿದ್ದ ಆ ವಿಡಿಯೋ ಈಗ ವೈರಲ್‌ ಆತ್ತಿದೆ..
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.. ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಸೆಳೆಯೋದಕ್ಕಾಗಿ ಯುವಕರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ.. ರೀಲ್ಸ್‌ ಮಾಡೋದಕ್ಕಾಗಿ ಯುವಕನೊಬ್ಬ ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್‌ ಹಾಕಿ ಹೆಣದಂತೆ ಮಲಗಿದ್ದ.. ಅದನ್ನು ನೋಡಿದ ಜನ ನಿಜವಾಗಿಯೂ ಸತ್ತಿದ್ದಾನೆ ಎಂದುಕೊಂಡಿದ್ದರು..
ಈ ರೀಲ್ ಮೇಕಿಂಗ್ ವೀಡಿಯೋ ಸಾಮಾಜಿಕ ಜಾಲತಾಣ ಎಕ್ಸ್ ಆಫ್ ಯುಪಿ ಪೊಲೀಸ್ ನಲ್ಲಿ ಪೋಸ್ಟ್‌ ಮಾಡಲಾಗಿದೆ.. ಈ ವಿಚಾರ ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಗಮನಕ್ಕೆ ಬರುತ್ತಿದ್ದಂತೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ..
ಸದ್ಯ ಪೊಲೀಸರು ಆರೋಪಿ ಮುಖೇಶ್‌ ಎಂಬಾತನನ್ನು ಬಂಧಿಸಲಾಗಿದೆ.. ಬಿಎನ್‌ಎಸ್‌ ಸಂಬಂಧಿತ ಸೆಕ್ಷನ್‌ಗಳ ಅಡಿ ಕೇಸ್‌ ದಾಖಲು ಮಾಡಲಾಗಿದೆ..

Share Post