CrimeDistricts

ದತ್ತಪೀಠ ಮೆರವಣಿಗೆ ವಿಚಾರಕ್ಕೆ ಗಲಾಟೆ:ಹಲ್ಲೆಗೆ ಯತ್ನ

ತುಮಕೂರು: ಚಿಕ್ಕಮಗಳೂರಿನ ದತ್ತಪೀಠ ಯಾತ್ರೆಗೆ ಹೋಗುವ ವಿಚಾರಕ್ಕೆ ವಿಶ್ವಹಿಂದೂ ಪರಿಷತ್‌ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ವಾಕ್ಸಮರ ನಡೆದಿದೆ. ಸೊಗಡು ಶಿವಣ್ಣರ ನಿರ್ಧಾರವನ್ನು ಖಂಡಿಸಿ ಮೆರವಣಿಗೆ ಬೇಡ ಎಂದಿದ್ದಕ್ಕೆ ವಿಶ್ವ ಹಿಂದೂ ಪರಿಷತ್‌ ಮುಖಂಡ ಶ್ರೀನಿವಾಸ್‌ರನ್ನು ತಳ್ಳಿ ಹೊಡೆಯಲು ಮುಂದಾಗಿದ್ದಾರೆ. ತುಮಕೂರು ನಗರದ ಟೌನ್‌ಹಾಲ್‌ ಬಳಿ ಜಮಾಯಿಸಿ ಬಸ್‌ಗಳಲ್ಲಿ ಬಾಬಾ ಬುಡನ್‌ಗಿರಿಯಲ್ಲಿರುವ ದತ್ತಪೀಠಕ್ಕೆ ಹೋಗಲು ತಯಾರಿ ನಡೆಸಿದ್ರು. ಈ ವೇಳೆ, ಯಾತ್ರೆಯ ರೂಪುರೇಷೆಯನ್ನು ಬದಲಾವನೆ ಮಾಡುವಂತೆ ಸೊಗಡು ಶಿವಣ್ಣ ಪಟ್ಟು ಹಿಡಿದ್ರು. ಟೌನ್‌ಹಾಲ್‌ ನಿಂದ ಗುಬ್ಬಿ ಗೇಟ್‌ವರೆಗು ಮೆರವಣಿಗೆಯಲ್ಲಿ ಹೋಗಿ ನಂತರ ಬಸ್‌ಗಳಲ್ಲಿ ಪ್ರಯಾಣ ಮಾಡುವಂತೆ ತಾಕೀತು ಮಾಡಿದ್ದಾರೆ. ಮೆರವಣಿಗೆಗೆ ಅನುಮತಿ ಪಡೆಯದ ಕಾರಣ ಶ್ರೀನಿವಾಸ್‌ ಅವರು ನಿರಾಕರಿಸದ್ದಾರೆ. ಇದರಿಂದ ರೊಚ್ಚಿಗೆದ್ದ ಶಿವಣ್ಣ ವಿಹಂಪ ನಾಯಕರನ್ನು ತಳ್ಳಿ ಅವರ ಮೇಲೆ ಹಲ್ಲೆಗೆ ಮುಂದಾದರು. ಕೂಡಲೇ ಅಲ್ಲಿದ್ದವರು ಶಿವಣ್ಣನನ್ನು ತಡೆದಿದ್ದಾರೆ.

Share Post