CrimeDistricts

ಟೀಚರ್‌ ಮಲಗೋಕೆ ಬರ್ತೀಯಾ ಎಂದ ಮುಖ್ಯಶಿಕ್ಷಕನಿಗೆ ಧರ್ಮದೇಟು..!

ರಾಯಚೂರು; ಟೀಚರ್‌ ನೈಟ್‌ ಮಲಗೋಕೆ ರ್ಬತೀಯಾ ಎಂದು ಮೆಸೇಜ್‌ ಮಾಡಿದ್ದ ಮುಖ್ಯಶಿಕ್ಷಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು, ಇದರಿಂದ ಬುದ್ಧಿ ಕಲಿತ ಆತ ಸಂತ್ರಸ್ತ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿ ಕ್ಷಮೆಯಾಚಿಸಿದ್ದಾರೆ.. ರಾಯಚೂರು ಹೊರವಲಯದ ಆದರ್ಶನ ಶಾಲೆಯಲ್ಲಿ ಈ ಘಟನೆ ನಡೆದಿದೆ.. ಇದೇ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿಗೆ ಈತ ಆಶ್ಲೀಲವಾಗಿ ಮೆಸೇಜ್‌ ಕಳುಹಿಸುತ್ತಿದ್ದ ಎನ್ನಲಾಗಿದೆ.. ಈ ವಿಚಾರವನ್ನು ಶಿಕ್ಷಕಿ ಸ್ಥಳೀಯರಿಗೆ ಹೇಳಿಕೊಂಡಿದ್ದು, ಜನರೆಲ್ಲಾ ಸೇರಿ ಶಿಕ್ಷಕನಿಗೆ ಬುದ್ಧಿ ಕಲಿಸಿದ್ದಾರೆ..

ಇದನ್ನೂ ಓದಿ; ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್‌!

ಮೊದಲಿಗೆ ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮೆಸೇಜ್‌ ಕಳುಹಿಸುತ್ತಿದ್ದ ಮುಖ್ಯಶಿಕ್ಷಕ ನಂತರ ಅಶ್ಲೀಲ ಮಸೇಜ್‌ಗಳನ್ನು ಕಳಹಿಸಲು ಶುರು ಮಾಡಿದ್ದನಂತೆ.. ಇದರಿಂದ ಬೇಸತ್ತ ಶಿಕ್ಷಕಿ ಹಾಗೆ ಮೆಸೇಜ್‌ಗಳನ್ನು ಕಳುಹಿಸದಂತೆ ವಾರ್ನಿಂಗ್‌ ಕೂಡಾ ಕೊಟ್ಟಿದ್ದಾರೆ.. ಆದರೂ ಆತ ಮೆಸೇಜ್‌ಗಳನ್ನು ಕಳುಹಿಸೋದನ್ನು ನಿಲ್ಲಿಸಿಲ್ಲ.. ಈ ವಿಚಾರ ತಿಳಿದ ಸ್ಥಳೀಯರು ಮುಖ್ಯಶಿಕ್ಷಕ ಮೆಹಬೂಬ್‌ ಅಲಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಕೂಡಾ ಹರಿದಿದ್ದಾರೆ..

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

Share Post