CrimeDistricts

ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ!

ಶಿವಮೊಗ್ಗ; ಹೋಟೆಲ್‌ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಶಿವಮೊಗ್ಗ ನಗರದ ಕ್ಲಾರ್ಕ್‌ ಪೇಟೆಯಲ್ಲಿ, ಮಾರುತಿ, ದರ್ಶನ್‌ ಹಾಗೂ ಭವನೇಶ್ವರಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.. ಘಟನೆಗೆ ಕಾರಣ ಏನು ಅನ್ನೋದು ಗೊತ್ತಾಗಿಲ್ಲ..

ಇದನ್ನೂ ಓದಿ; ಸರಣಿ ಅಪಘಾತ ಮಾಡಿದ ವೊಲ್ವೋ ಬಸ್‌ ಚಾಲಕ!

ಭುವನೇಶ್ವರಿಯವರು ತಮ್ಮ ಸಹೋದರ ಮಾರುತಿ ಹಾಗೂ ಪುತ್ರ ದರ್ಶನ್‌ ಜೊತೆ ಶಿವಮೊಗ್ಗ ಒಟಿ ರಸ್ತೆಯ ವಿಜಯ ಗ್ಯಾರೇಜ್‌ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.. ಹೋಟೆಲ್‌ನಲ್ಲಿ ಕಾರ್ಮಿಕರಾಗಿ ಭುವನೇಶ್ವರಿ ಕೆಲಸ ಮಾಡುತ್ತಿದ್ದರು.. ಮಾರುತಿ ಟಿಬಿ ಕಾಯಿಲೆಯಿಂದ ಬಳಲುತಿದ್ದ ಕಾರಣ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಭುವನೇಶ್ವರಿ ಪುತ್ರ ದರ್ಶನ್‌ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಟೀಚರ್‌ ಮಲಗೋಕೆ ಬರ್ತೀಯಾ ಎಂದ ಮುಖ್ಯಶಿಕ್ಷಕನಿಗೆ ಧರ್ಮದೇಟು..!

Share Post