CrimeDistricts

ಅನೈತಿಕ ಸಂಬಂಧ ಶಂಕೆ; ಪತ್ನಿಯ ಭೀಕರ ಹತ್ಯೆ, ಅತ್ತೆಯ ಸ್ಥಿತಿ ಗಂಭೀರ

ವಿಜಯಪುರ; ಪತ್ನಿ ಬೇರೊಬ್ಬ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಈ ವೇಳೆ ಅಡ್ಡ ಬಂದ ಅತ್ತೆಯ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ.. ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಅತ್ತೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ..

ಇದನ್ನೂ ಓದಿ; ಎರಡು ಮಕ್ಕಳನ್ನು ಕೊಂದು ಪೊಲೀಸರಿಗೆ ಕರೆ ಮಾಡಿದ ಮಹಾತಾಯಿ!

ಹೊಲದಲ್ಲೇ ಬರ್ಬರ ಹತ್ಯೆ;

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಎಂಬ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ.. 36 ವರ್ಷದ ಯಲ್ಲವ್ವ ಗಳವೆ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ.. ಈಕೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು.. ಈ ವೇಳೆ ಅಲ್ಲಿಗೆ ಬಂದ ಪತಿ, ಪತ್ನಿಯ ಶೀಲ ಶಂಕಿಸಿ ಜಗಳ ಕಾಯ್ದಿದ್ದಾನೆ.. ಇದು ವಿಕೋಪಕ್ಕೆ ತಿರುಗಿ ಅಲ್ಲಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ..

ಇದನ್ನೂ ಓದಿ; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರಿಗೆ ಎಷ್ಟು ಅಂಕ..?

ಅಡ್ಡ ಬಂದ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ;

ಗಂಡ-ಹೆಂಡತಿ ಜಗಳ ಮಾಡುತ್ತಿರುವುದನ್ನು ನೋಡಿದ ಅತ್ತೆ ಸೌರವ್ವ ಜಗಳ ಬಿಡಿಸಲು ಬಂದಿದ್ದಾಳೆ.. ಈ ವೇಳೆ ಕೋಪಗೊಂಡ ಆರೋಪಿ ಸಾಬು ಗಳವೆ ಅತ್ತೆ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.. ಅತ್ತೆ   ಸೌರವ್ವ ಕೂಡಾ ತೀವ್ರವಾಗಿ ಗಾಗಯಗೊಂಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ..

ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಹೊಸ ತೊಡಕಿನ ಮಾಂಸ ಹೀಗೆ ಜೀರ್ಣಿಸಿಕೊಳ್ಳಿ!

 

Share Post