BengaluruCrime

ಎರಡು ಮಕ್ಕಳನ್ನು ಕೊಂದು ಪೊಲೀಸರಿಗೆ ಕರೆ ಮಾಡಿದ ಮಹಾತಾಯಿ!

ಬೆಂಗಳೂರು; ಅದೆಷ್ಟೇ ಕಷ್ಟ ಇದ್ದರೂ ಹೆತ್ತ ತಾಯಿ ದೇವತೆಯಂತೆ ಮಕ್ಕಳನ್ನು ನೋಡಿಕೊಳ್ಳುತ್ತಾಳೆ.. ಆದ್ರೆ ಇಲ್ಲೊಬ್ಬ ಮಹಾತಾಯಿ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾಳೆ.. ತನ್ನಿಬ್ಬರು ಮಕ್ಕಳನ್ನು ಕೊಂದಿರುವ ತಾಯಿ ನಂತರ, ಪೊಲೀಸರಿಗೆ ಕರೆ ಮಾಡಿ ತಾನು ಇಬ್ಬರು ಮಕ್ಕಳನ್ನು ಕೊಂದಿರೋದಾಗಿ ತಿಳಿಸಿದ್ದಾಳೆ..

ಇದನ್ನೂ ಓದಿ; ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರಿಗೆ ಎಷ್ಟು ಅಂಕ..?

ಹೆತ್ತ ತಾಯಿಯಿಂದಲೇ ಇಬ್ಬರು ಮಕ್ಕಳ ಕೊಲೆ;

ಆಂಧ್ರಪ್ರದೇಶದ ಮೂಲದ ಗಂಗಾದೇವಿ ಎಂಬಾಕೆಯೇ ಆರೋಪಿ..  ಈಕೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದಳು.. ಆದ್ರೆ ಅದೇನಾಯ್ತೋ ಏನೋ ಗಂಗಾದೇವಿ, ತನ್ನ 9 ವರ್ಷದ ಮಗಳು ಲಕ್ಷ್ಮೀ ಹಾಗೂ 7 ವರ್ಷದ ಮಗ ಗೌತಮ್‌ ರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.. ಅನಂತರ ಜಾಲಹಳ್ಳಿ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಕ್ಕಳನ್ನು ಕೊಂದಿರುವುದಾಗಿ ತಿಳಿಸಿದ್ದಾಳೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಹೊಸ ತೊಡಕಿನ ಮಾಂಸ ಹೀಗೆ ಜೀರ್ಣಿಸಿಕೊಳ್ಳಿ!

ಆರೋಪಿಯನ್ನು ಬಂಧಿಸಿರುವ ಪೊಲೀಸರು;

ಪೊಲೀಸ್‌ ಕಂಟ್ರೋಲ್‌ ರೂಮ್‌ ನಂಬರ್‌ಗೆ ಕರೆ ಮಾಡಿದ್ದ ಗಂಗಾದೇವಿ, ತಾನು ಮನೆಯಲ್ಲಿ ಇಬ್ರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಹೇಳಿದ್ದಳು.. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ಇಬ್ಬರು ಮಕ್ಕಳು ಸತ್ತುಬಿದ್ದಿರುವುದು ಪತ್ತೆಯಾಗಿದೆ.. ಕೂಡಲೇ ಆರೋಪಿ ಗಂಗಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ; ಬಿಜೆಪಿ-ಜೆಡಿಎಸ್‌ ಒಕ್ಕಲಿಗ ನಾಯಕರ ಹೊಸತೊಡಕು ಪಾಲಿಟಿಕ್ಸ್‌!

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಗಂಗಾದೇವಿ;

ಗಂಗಾದೇವಿ ಆಂಧ್ರ ಮೂಲದವಳಾಗಿದ್ದು, ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್‌ ಕೆಲಸ ಮಾಡುತ್ತಿದ್ದಾಳೆ.. ಈ ಹಿಂದೆ ಗಂಗಾದೇವಿ ಗಂಡನ ವಿರುದ್ಧ ಕೇಸ್‌ ದಾಖಲಿಸಿದ್ದಳು ಎಂದು ತಿಳಿದುಬಂದಿದೆ.. ಮಕ್ಕಳ ಜೊತೆ ಗಂಡ ಅಶಭ್ಯ ವರ್ತನೆ ತೋರುತ್ತಾನೆ ಎಂದು ಗಂಗಾದೇವಿ ದೂರು ನೀಡಿದ್ದಳು. ಹೀಗಾಗಿ ಆಕೆಯ ಗಂಡನನ್ನು ಪೋಕ್ಸೋ ಕಾಯ್ದೆಯಡಿ ಜೈಲಿಗೆ ಕಳುಹಿಸಲಾಗಿದೆ.. ಇದೀಗ ಗಂಗಾದೇವಿ ಕೂಡಾ ಜೈಲು ಸೇರಿದ್ದಾಳೆ.

ಇದನ್ನೂ ಓದಿ; ಎಸಿನೂ ಬೇಡ, ಫ್ಯಾನ್‌ ಕೂಡಾ ಬೇಡ; ಈ ಗಿಡಗಳಿದ್ದರೆ ಮನೆ ತಂಪು ತಂಪು ಕೂಲ್‌ ಕೂಲ್‌

 

Share Post