CrimeDistricts

ಸುಳೆಭಾವಿ ಜೋಡಿ ಕೊಲೆ; ಇಬ್ಬರು ಪೊಲೀಸರ ಅಮಾನತು

ಬೆಳಗಾವಿ; ಎರಡು ದಿನಗಳ ಹಿಂದೆ ಬೆಳಗಾವಿ ಬಳಿ ಸುಳೆಭಾವಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆಧಾರದ ಮೇಲೆ ಇಬ್ಬರು ಪೊಲೀಸರನ್ನು ಅಮಾನತಿ ಮಾಡಲಾಗಿದೆ. ಬೆಳಗಾಗಿ ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಈ ಆದೇಶ ಹೊರಡಿಸಿದ್ದಾರೆ.

ಮಾರಿಹಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಬಿ.ಎನ್. ಬಳಗಣ್ಣವರ, ಕಾನ್ಸ್‌ಟೇಬಲ್‌ ಆರ್.ಎಸ್. ತಳೇವಾಡ ಅಮಾನತುಗೊಂಡವರು.  ಕಳೆದ ಎರಡು ದಿನಗಳ ಹಿಂದೆ ಸುಳೇಭಾವಿ ಗ್ರಾಮದಲ್ಲಿ ಮಹೇಶ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಅಮಾನತುಗೊಂಡ ಇಬ್ಬರನ್ನೂ ಸುಳೇಭಾವಿ ಗ್ರಾಮದ ಬೀಟ್‌ಗೆ ಹಾಕಲಾಗಿತ್ತು. ಆದ್ರೆ ಅವರಿಬ್ಬರು ಗ್ರಾಮದಲ್ಲಿನ ಆಗುಹೋಗುಗಳ ಬಗ್ಗೆ ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಲಾಗಿದೆ.

Share Post