CrimeNational

ಅಯೋಧ್ಯೆ ಬಳಿ ಭೀಕರ ಅಪಘಾತ ; ಕರ್ನಾಟಕದ ಮೂವರು ದುರ್ಮರಣ

ಕಲಬುರಗಿ; ಅಯೋಧ್ಯೆಯಲ್ಲಿ ನಡೆದ ಅಪಘಾತದಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದಾರೆ.. ಟಿಟಿವಾಹನದಲ್ಲಿ ಕಲ್ಬುರ್ಗಿಯ 22 ಮಂದಿ ಅಯೋಧ್ಯೆಗೆ ಹೋಗುತ್ತಿದ್ದರು ಈ ವೇಳೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಕಲ್ಬುರ್ಗಿಯ ಮೂವರು ಸಾವನ್ನಪ್ಪಿದ್ದಾರೆ.

  ಕಾಶಿ ವಿಶ್ವನಾಥನ ದರ್ಶನ ಮುಗಿಸಿಕೊಂಡು ಅಯೋಧ್ಯ ಕಡೆಗೆ ಟಿಟಿ ವಾಹನದಲ್ಲಿ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಲಾರಿ ಮತ್ತು ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

  ಕಲಬುರ್ಗಿಯ ಕಾಶೀನಾಥ್ ತಂಗ್ಯವ್ವ ಶಿವರಾಜ್ ಮೃತಪಟ್ಟವರು. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಟಿಟಿ ವಾಹನದಲ್ಲಿದ್ದವರು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಎಲ್ಲರೂ ಟಿಟಿ ವಾಹನದಲ್ಲಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದರು.

 

Share Post