Crime

ರಕ್ಷಣಾ ಪಡೆಗಳ ಗುಂಡಿಗೆ ಆರು ನಕ್ಸಲರು ಮಟಾಶ್‌

ರಾಯ್‌ಪುರ: ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಂದಿ ನಕ್ಸಲರನ್ನು ಎನ್‌ಕೌಂಟರ್‌ ಮಾಡಿದ ಘಟನೆ ತೆಲಂಗಾಣ ಹಾಗೂ ಛತ್ತೀಸಗಡ ಗಡಿ ಪ್ರದೇಶದ ಕಿಸ್ತಾರಾಮ್‌ ಪಿಎಸ್‌ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ತೆಲಂಗಾಣ ಹಾಗೂ ಛತ್ತೀಸಗಡ ಪೊಲೀಸರು ಮತ್ತು ಸಿಆರ್‌ಪಿಎಫ್‌ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಎನ್‌ಕೌಂಟರ್‌ ನಡೆಸಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಕ್ಸಲರಿಗಾಗಿ ಹುಡುಕು ಕಾರ್ಯಾಚರಣೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಿರುವುದಾಗಿ ಭದ್ರಾದ್ರಿ ಕೊಥಾಗುಡೆಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ದತ್ ತಿಳಿಸಿದ್ದಾರೆ. ಸದ್ಯ ಈ ಭಾಗದಲ್ಲಿ ಇನ್ನೂ ಕಾರ್ಯಚರಣೆ ಮುಂದುವರೆದಿದೆ.

Share Post