Districts

ಕೊರೊನಾ ನಿಯಮ ಪಾಲಿಸಿ – ಹೊಸ ವರ್ಷ ಆಚರಿಸಿ : ಬೊಮ್ಮಾಯಿ

ಬೆಂಗಳೂರು : ಹೊಸ ವರ್ಷದ ಆಚರಣೆ ಎಲ್ಲಿ ಬೇಕಾದರೂ ಮಾಡಬಹುದು ಆದರೆ ಕೊರೊನಾ ನಿಯಮ ಪಾಲನೆ ಮರೆಯುವಂತಿಲ್ಲ. ಬಸವರಾಜ್‌ ಬೊಮ್ಮಾಯಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದಾಗ ಹೀಗೆ ಹೇಳಿದರು.

ಹೊಸ ವರ್ಷಾಚರಣೆಯ ಸಂಬಂಧ ಜನರು ಗುಂಪು ಗೂಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನೈಟ್‌ ಕರ್ಫ್ಯೂ ಹೇರಿದೆ. ರಾತ್ರಿ ೧೦ರಿಂದ ನಸುಕಿನ ಜಾವ ೫ರ ವರೆಗೆ ಯಾವುದೇ ಹೊರಗಡೆ ಓಡಾಡುವಂತಿಲ್ಲ. ಓಮಿಕ್ರಾನ್‌ ಹರಡುವಿಕೆಯನ್ನು ತಡೆಗಟ್ಟಲು ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದರೂ ಕೂಡ, ಹೊಸ ವರ್ಷವನ್ನು ಸಂಭ್ರಮಿಸಿ ಎಂದು ಹೇಳಿದ್ದಾರೆ.

ಆರ್ಥಿಕ ಚಟುವಟಿಕೆಗಳು ನಡೆಯಲಿ ಎಂಬುದೇ ನಮ್ಮ ಆಶಯ ಕೂಡ ಆದರೆ ಪರಿಸ್ಥಿತಿ ಈ ರೀತಿ ಇರುವುದರಿಂದ ಕರ್ಫ್ಯೂ ಹೇರುವಂತಾಗಿದೆ ಎಂದು ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಜನರು ಎಲ್ಲಿಗೆ ಬೇಕಾದರೂ ಹೋಗಬಹುದು, ರೆಸಾರ್ಟ್‌ ಅಥವ ಪ್ರವಾಸಿ ತಾಣಗಳಿಗೆ ಜನರು ಹೋಗಬಹುದಾಗಿದೆ. ಆದರೆ ನಿಯಮ ಪಾಲನೆ ಖಡ್ಡಾಯ ಎಂದು ಸಿಎಂ ತಿಳಿಸಿದ್ದಾರೆ.

Share Post