Crime

ಕಾರಿನ ಮೇಲೆ ಉರುಳಿದ ಕಲ್ಲು: ಓರ್ವ ಸಾವು

ಜಮ್ಮು: ಜಮ್ಮುವಿನ ಶ್ರೀನಗರ ಹೈವೇನಲ್ಲಿ ರಾಂಬನ್‌ ಜಿಲ್ಲೆ ಭೀಕರ ದುರಂತ ನಡೆದುಹೋಗಿದೆ. ಕಾರಿನ ಮೇಲೆ ದೊಡ್ಡ ಕಲ್ಲೊಂದು ಉರುಳಿಬಿದ್ದಿದ್ದು, ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ನಜ್ಜುಗುಜ್ಜಾಗಿದ್ದಾನೆ. ಮತ್ತಿಬ್ಬರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡ ಉರುಳು ಕಲ್ಲು ಬಿದ್ದಿದ್ದರಿಂದಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜಾಗಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿತ್ತು.

ಬೆಟ್ಟ ಗುಡ್ಡಗಳ ನಡುವೆ ಹೈವೇ ಹಾದುಹೋಗಿದ್ದು, ಬೆಟ್ಟಡ ಮೇಲಿಂದ ದೊಡ್ಡ ಕಲ್ಲು ಉರುಳಿ ಬಂದು ಕಾರಿನ ಮೇಲೆ ಬಿದ್ದಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರನ್ನು ಹೊರೆತೆಗೆಯಲು ಹರಸಾಹಸಪಡಬೇಕಾಯಿತು. ಕೊನೆಗೆ ಜೆಸಿಬಿ ಬಳಿ ಕಾರನ್ನು ಸ್ಥಳಾಂತರಿಸಬೇಕಾಯಿತು.

 

Share Post