CrimeDistricts

ನಾಲ್ವರು ವಿದ್ಯಾರ್ಥಿಗಳನ್ನು ಅರೆಬೆತ್ತಲೆ ಮಾಡಿ ಹಲ್ಲೆ!

ಮಂಗಳೂರು (Mangalore); ಫುಟ್ಬಾಲ್‌ ಆಟದಲ್ಲಿ ನಡೆದ ಜಗಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಅಪಹರಣ ಮಾಡಿ ಅವರನ್ನು ಅರೆಬೆತ್ತಲೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ.. ಮಂಗಳೂರು ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ.. ಇದರ ದೃಶ್ಯಗಳು ಈಗ ವೈರಲ್‌ ಆಗುತ್ತಿದ್ದು, ಎಲ್ಲೆಡೆಯಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಕುಮಾರಸ್ವಾಮಿ ಮೇಲೆ ಎಸ್‌ಐಟಿ ಅಸ್ತ್ರ!; ರಾಜ್ಯಪಾಲರಿಗೆ ಪತ್ರ ರವಾನೆ!

ಫಟ್ಬಾಲ್‌ ಆಟದ ವಿಚಾರವಾಗಿ ಮಂಗಳೂರಿನ ಪ್ರಖ್ಯಾತ ಎರಡು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು.. ಅದಾದ ನಂತರ ಒಂದು ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ.. ನಂತರ ಅವರನ್ನು ಅರೆಬೆತ್ತಲೇ ಮಾಡಿ ಹಲ್ಲೆ ಮಾಡಲಾಗಿದೆ.. ಮೂರು ಸ್ಥಳಗಳಿಗೆ ಸ್ಥಳಾಂತರ ಮಾಡಿರುವ ಆರೋಪಿಗಳು ಕ್ಷಮೆ ಕೇಳಿಸಿಕೊಂಡು ಬಸ್ಕಿ ಕೂಡಾ ಹೊಡೆಸಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿದ ಯುವಕ!

ಇಬ್ರಾಹಿಂ ಖಲೀಲ್‌, ಮಹಮದ್‌ ಆಫ್ರಾನ್‌, ಮಹಮದ್‌ ಜನ್ಮದ್‌ ಹಾಗೂ ಮಹಮದ್‌ ಶುರೈ ಎಂಬುವವರೇ ಅಪಹರಣಕ್ಕೊಳಗಾಗಿ ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.. ಈ ಸಂಬಂಧ ದಿಯಾನ್‌, ಸಲ್ಮಾನ್‌, ಅನ್ನೈ, ಅನಾಸ್‌, ತಸ್ಮೀನ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.. ಆಗಸ್ಟ್ 14 ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ ಯೆನೆಪೋಯ ಪುಟ್ಬಾಲ್ ತಂಡ ಹಾಗೂ ಅಲೋಶಿಯಸ್ ತಂಡದ ನಡುವೆ ಪಂದ್ಯ ನಡೆದಿತ್ತು. ಇದೇ ವೇಳೆ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ..

Share Post