CrimeDistricts

ಪರ ಪುರುಷನ ಜತೆ ಮಲಗಲು ಒತ್ತಡ; ನಿರಾಕರಿಸಿದ್ದಕ್ಕೆ ಪತ್ನಿಯ ಕೊಲೆ!

ಯಾದಗಿರಿ; ಪತಿ ವಿಪರೀತ ಸಾಲ ಮಾಡಿದ್ದ.. ಸಾಲ ತೀರಿಸೋಕೆ ಆಗದೇ ಹಣ ಕೊಟ್ಟವನ ಜೊತೆ ತನ್ನ ಪತ್ನಿಯನ್ನು ಮಲಗಿಸಲು ತೀರ್ಮಾನಿಸಿದ್ದ.. ಆದ್ರೆ ಇದಕ್ಕೆ ಪತ್ನಿ ಒಪ್ಪದಿದ್ದಕ್ಕೆ ಗಂಡ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ.. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ..
ಶರಣಬಸಮ್ಮ ಎಂಬುವವರೇ ಗಂಡನಿಂದ ಕೊಲೆಯಾದ ಮಹಿಳೆಯಾಗಿದ್ದಾರೆ.. ಮರಣೋತ್ತರ ಪರೀಕ್ಷೆ ನಂತರ ಕೊಲೆ ಕೇಸ್‌ ದಾಖಲು ಮಾಡಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.. ಶರಣಬಸಮ್ಮನನ್ನು ಕೊಲೆ ಮಾಡಿದ ಮೇಲೆ ಪತಿ ಭೀಮಣ್ಣ, ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದ.. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಗೊತ್ತಾಗಿದೆ.. ಹೀಗಾಗಿ, ಶರಣಬಸಮ್ಮ ಕಡೆಯವರು ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ..
ಭೀಮಣ್ಣ ಸಾಲ ಮಾಡಿಕೊಂಡಿದ್ದು, ಇದಕ್ಕಾಗಿ ಪತ್ನಿಯ ಶೀಲ ಮಾರಾಟಕ್ಕಿಟ್ಟಿದ್ದ ಎಂದು ಆರೋಪ ಮಾಡಲಾಗಿದೆ.. ಸಾಲ ಕೊಟ್ಟ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಯ ಆರೋಪಿ ಪೀಡುತ್ತಿದ್ದ ಎಂದು ಆರೋಪಿಸಲಾಗಿದೆ.. ಆದ್ರೆ ಇದನ್ನು ಶರಣ ಬಸಮ್ಮ ಧಿಕ್ಕರಿಸಿದ್ದರಿಂದ ಈ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ..

ಜ್ಯೂಸ್‌ನಲ್ಲಿ ಮೂತ್ರ ಮಿಕ್ಸ್ ಮಾಡುತ್ತಿದ್ದ ಅಂಗಡಿ ಮಾಲೀಕ; ಗೊತ್ತಾಗಿದ್ದು ಹೇಗೆ..?

Share Post