CrimePolitics

ಸಂತ್ರಸ್ತೆಯರಿಗೆ ಧೈರ್ಯ ತುಂಬುವುದಕ್ಕಾಗಿ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್‌ ಅರೆಸ್ಟ್‌!

ಬೆಂಗಳೂರು; ವಿದೇಶದಿಂದ ವಾಪಸ್ಸಾದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣನನ್ನು ರಾತ್ರಿಯೇ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.. ಪ್ರಜ್ವಲ್‌ನನ್ನು ಮಹಿಳಾ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ… ಜೀಪ್‌ನಲ್ಲಿ ಮಹಿಳಾ ಅಧಿಕಾರಿಗಳೇ ಆರೋಪಿಯನ್ನು ಕರೆತಂದಿದ್ದಾರೆ.. ಮಹಿಳಾ ಅಧಿಕಾರಿಗಳಿಂದಲೇ ಯಾಕೆ ಬಂಧನ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ..

ಸಾಮಾನ್ಯವಾಗಿ ಮಹಿಳಾ ಆರೋಪಿಗಳನ್ನು ಬಂಧಿಸುವುದಕ್ಕಾಗಿ ಮಹಿಳಾ ಅಧಿಕಾರಿಗಳನ್ನು ಬಳಸುತ್ತಾರೆ.. ಆದ್ರೆ ಪ್ರಜ್ವಲ್‌ ಬಂಧನಕ್ಕೆ ಮಹಿಳಾ ಅಧಿಕಾರಿಗಳನ್ನು ಬಳಸಲಾಗಿದೆ.. ಇದರ ಹಿಂದಿನ ಉದ್ದೇಶ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವುದೇ ಆಗಿದೆ ಎನ್ನಲಾಗಿದೆ..

ಪ್ರಜ್ವಲ್‌ ನನ್ನು ಕರೆತರುವಾಗ ಜೀಪ್‌ ನಲ್ಲಿ ಡ್ರೈವರ್‌ ಬಿಟ್ಟು ಪ್ರಜ್ವಲ್‌ ಜೊತೆ ಮಹಿಳಾ ಅಧಿಕಾರಿಗಳೇ ಇದ್ದರು.. ಹೀಗೆ ಬಂಧನ ಮಾಡುವುದರ ಮೂಲಕ ಆರೋಪಿಗೆ ಮುಜುಗರ ಉಂಟು ಮಾಡುವುದು, ಹಾಗೂ ಸಂತ್ರಸ್ತೆಯರು ಧೈರ್ಯವಾಗಿ ಬಂದು ಕೇಸ್‌ ದಾಖಲಿಸುವಂತೆ ಧೈರ್ಯ ತುಂಬುವುದಕ್ಕಾಗಿ ಈ ರೀತಿಯ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ.. ಆದ್ರೆ ಇದು ಅಧಿಕೃತ ಮಾಹಿತಿ ಅಂತೂ ಅಲ್ಲ.. ಕೆಲ ಮೂಲಗಳಿಂದ ತಿಳಿದುಬಂದ ಮಾಹಿತಿ ಅಷ್ಟೇ..

 

Share Post