Crime

ಪವಿತ್ರ ದೇಗುಲಕ್ಕೆ ಅತಿಕ್ರಮ ಪ್ರವೇಶ: ವ್ಯಕ್ತಿಯ ಕೊಲೆ

ಚಂಡೀಘಡ: ಗರ್ಭಗುಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿದ ವ್ಯಕ್ತಿಯೋರ್ವವನ್ನು ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿರುವ ಘಟನೆ ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆದಿದೆ. ಸಿಖ್ಖರ ಪವಿತ್ರ ದೇಗುಲ ಅಮೃತಸರದಲ್ಲಿ ನಿನ್ನೆ ಸಂಜೆ ಧರ್ಮ ಗುರುಗಳು ಪವಿತ್ರ ಗ್ರಂಥವನ್ನು ಪಠಣ ಮಾಡುವ ವೇಳೆ ಅಪರಿಚಿತ ವ್ಯಕ್ತಿಯಬ್ಬ ಇದ್ದಕ್ಕಿದ್ದಂತೆ ಗರ್ಭಗುಡಿಯಳಕ್ಕೆ ನೆಗೆದು ಖಡ್ಗ ಝಳಪಿಸಿದ್ದಾನೆ. ಕೂಡಲೇ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ(ಎಸ್‌ಜಿಪಿಸಿ) ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರನೆ ನಡೆಸುವಷ್ಟರಲ್ಲಿ ಕೋಪೋದ್ರಿಕ್ತ ಗುಂಪೊಂದು ಆ ವ್ಯಕ್ತಿಯನ್ನು ಕೊಠಡಿಗೆ ಕರೆದೊಯ್ದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಆಥಳಿತಕ್ಕೆ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ.

Share Post