BengaluruCrime

ಮದುವೆಯಾದವನ ಜೊತೆ ಪ್ರೀತಿ!; ಕೆರೆಗೆ ಹಾರವಾದ ಪ್ರೇಮಿಗಳು!

ಬೆಂಗಳೂರು; ಮದುವೆಯಾದವನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಕಾಲೇಜು ಯುವತಿ ತನ್ನ ಪ್ರಿಯತಮನ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಬೆಂಗಳೂರಿನ ನೈಸ್‌ ರಸ್ತೆ ಸಮೀಪದ ಕೆರೆಯೊಂದರಲ್ಲಿ ಇಬ್ಬರು ಮೃತದೇಹಗಳು ಪತ್ತೆಯಾಗಿವೆ..

ತಲಘಟ್ಟಪುರದ ಅಂಜನಾಪುರದಲ್ಲಿ ವಾಸವಿದ್ದ ಕಾಲೇಜು ವಿದ್ಯಾರ್ಥಿನಿ ಅಂಜನಾ (20) ಹಾಗೂ ಕೋಣನಕುಂಟೆಯ ಶ್ರೀಕಾಂತ್‌ (25) ಆತ್ಮಹತ್ಯೆ ಮಾಡಿಕೊಂಡ ಯುವಜೋಡಿಯಾಗಿದ್ದಾರೆ.. ಇಬ್ಬರೂ ಜುಲೈ 1 ರಂದು ನಾಪತ್ತೆಯಾಗಿದ್ದರು.. ಇದೀಗ ಅವರು ಕರೆಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ..

ಶ್ರೀಕಾಂತ್‌ಗೆ ಈಗಾಗಲೇ ಮದುವೆಯಾಗಿತ್ತು.. ಆದರೂ ಅಂಜನಾಳನ್ನು ಪ್ರೀತಿಸುತ್ತಿದ್ದ.. ಇಬ್ಬರು ಮದುವೆಯಾಗೋದಕ್ಕೆ ಆಗೋದಿಲ್ಲ ಎಂದು ಅರಿತ ಇಬ್ಬರೂ ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇಬ್ಬರೂ ಜುಲೈ 1 ರಂದು ನಾಪತ್ತೆಯಾಗಿದ್ದರು.. ಹೀಗಾಗಿ ಇಬ್ಬರ ಪೋಷಕರು, ಕೋಣನಕುಂಟೆ ಮತ್ತು ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಕೇಸ್‌ ದಾಖಲಿಸಿದ್ದರು..

ಮೃತರ ಮೊಬೈಲ್‌ಗಳಲ್ಲಿ ವಿಡಿಯೋ ಮಾಡಲಾಗಿದ್ದು, ಆ ಮೂಲಕ ಇಬ್ಬರೂ ಪ್ರೀತಿಸುತ್ತಿದ್ದ ಅನ್ನೋದು ಗೊತ್ತಾಗಿದೆ..

 

Share Post