CrimeDistricts

ಹಸುವಿನ ಮೇಲೆ ಆ್ಯಸಿಡ್, ಕಾದ ಎಣ್ಣೆ ಸುರಿದ ದುಷ್ಕರ್ಮಿಗಳು!

ಕೋಲಾರ(Kolar); ಶ್ರೀಕೃಷ್ಣಜನ್ಮಾಷ್ಠಮಿಯ ದಿನದಂದೇ ಕಿಡಿಗೇಡಿಗಳು ಹಸುವಿನ ಮೇಲೆ ಆ್ಯಸಿಡ್ ಹಾಗೂ ಕಾದ ಎಣ್ಣೆ ಸುರಿದು ಗಾಯಗೊಳಿಸಿರುವ ಘಟನೆ ನಡೆದಿದೆ.. ಕೋಲಾರ ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಬರುವ ರೆಹಮತ್‌ ನಗರದಲ್ಲಿ ಈ ಕೃತ್ಯ ಎಸಗಿಲಾಗಿದ್ದು, ಘಟನೆಯಿಂದಾಗಿ ಹಸುವಿನ ಚರ್ಮ ಸುಲಿದಂತಾಗಿದ್ದು, ತೀವ್ರವಾಗಿ ಗಾಯಗಳಾಗಿವೆ..

ಇದನ್ನೂ ಓದಿ; ಯೋಗಾ ಹೆಸರಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗಗುರು!

ಬಿಡಾಡಿ ಹಸುವಿನ ಮೇಲೆ ಕಿಡಿಗೇಡಿಗಳು ಬೇಕಂತಾನೇ ಈ ಕೃತ್ಯ ಎಸಗಿದ್ದಾರೆ.. ಈ ವಿಷಯ ಎಲ್ಲರಿಗೂ ಗೊತ್ತಾಗುತ್ತಿದ್ದಂತೆ, ಹಸುವನ್ನು ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ವಿಷಯ ತಿಳಿದ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೋಲಾರದ ಗಲ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ..

ಇದನ್ನೂ ಓದಿ; ಶಾಸಕರ ಮನೆಗೆ ನುಗ್ಗಿದ ಕಳ್ಳರ ಗುಂಪು!; ಅವರು ಕದ್ದಿದ್ದು ಕೇಳಿದ್ರೆ ನಗಾಡ್ತೀರಿ!

Share Post