CrimeDistricts

ಮಹಾರಾಣಿ ಕಾಲೇಜಿನ ಗೋಡೆ ಕುಸಿತ; ಅನಾಹುತ ತಪ್ಪಿಸಿದ ಪ್ರಾಂಶುಪಾಲರು

ಮೈಸೂರು; ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಮಹಾರಾಣಿ ಕಾಲೇಜಿನ ಕೆಲಭಾಗ ಇಂದು ಕುಸಿದಿದೆ. ಅದೃಷ್ಟವಶಾತ್‌ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳು ತರಗತಿಗೆ ಆಗಮಿಸಬೇಕಿತ್ತು. ಆದ್ರೆ ರಸಾಯನಶಾಸ್ತ್ರ ಪ್ರಯೋಗಾಲಯದ ವಿಭಾಗದ ಕೊಠಡಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ವಿಭಾಗದ ಮುಖ್ಯಸ್ಥರು, ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಇದ್ರಿಂದ ಎಚ್ಚೆತ್ತ ಪ್ರಾಂಶುಪಾಲರು ಕೊಠಡಿಗೆ ಬೀಗ ಹಾಕಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಕೊಠಡಿಯ ಸ್ವಲ್ಪ ಭಾಗ ಕುಸಿದಿದೆ.

ಈ ಪಾರಂಪರಿಕ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಅಕ್ಟೋಬರ್‌ 23ರಂದು ಭೂಮಿ ಪೂಜೆ ಕೂಡಾ ನಡೆದಿತ್ತು. ಆದ್ರೆ ಇತ್ತೀಚೆಗೆ ಮಳೆ ಜಾಸ್ತಿಯಾಗಿದ್ದರಿಂದ ಕಟ್ಟಡದ ಕೆಲ ಭಾಗ ಕುಸಿದಿದೆ.

Share Post