Crime

ಭೀಕರ ಅಪಘಾತ : ಶಾಸಕನ ಪುತ್ರ ಸೇರಿ 7 ವಿದ್ಯಾರ್ಥಿಗಳು ದುರ್ಮರಣ

ಮುಂಬೈ : ಸೆಲ್ಸೂರ ಬಳಿ ಬ್ರಿಡ್ಜ್‌ ಮೇಲಿಂದ ಕಾರು ಕೆಳಗೆ ಬಿದ್ದು 7 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬಿಜೆಪಿ ಶಾಸಕ ವಿಜಯ್ ರಹಾಂಗದಲೆ ಪುತ್ರ ಆವಿಷ್ಕಾರ್ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ‌

ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ ಸುಮಾರು 11.30ರ ಆಸುಪಾಸಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಹೋಳ್ಕರ್‌ ಹೇಳಿದ್ದಾರೆ.

ಮಹೀಂದ್ರ XUV 500 ಕಾರಿನಲ್ಲಿ ಆವಿಷ್ಕಾರ್‌ ಮತ್ತು ಸ್ನೇಹಿತರು ಪರೀಕ್ಷೆ ಮುಗಿಸಿ ಡಿಯೋಲಿಯಿಂದ ವಾರ್ಧಾಗೆ ತೆರಳುವಾಗ ಕಾಡು ಹಂದಿಯೊಂದು ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಬ್ರಿಡ್ಜ್‌ನಿಂದ ಕೆಳಗೆ ಬಿದ್ದಿದೆ. ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ.

ಸಾವಂಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಆವಿಷ್ಕಾರ್‌, ನೀರಜ್‌ ಚೌಹಾಣ್‌, ನಿತೇಶ್‌ ಸಿಂಗ್‌, ವಿವೇಕ್‌ ನಂದನ್‌, ಪ್ರತ್ಯೂಷ್‌, ಶುಭಂ ಜೈಸ್ವಾಲ್‌, ಪವನ್‌ ಶಕ್ತಿ ಮೃತಪಟ್ಟವರು ಎಂದು ತಿಳಿದುಬಂದಿದೆ.

 

Share Post