Crime

ಮದುವೆ ಮನೆಯಲ್ಲಿ ಬಾವಿಗೆ ಬಿದ್ದು 13 ಸಾವು

ಲಕ್ನೌ : ಉತ್ತರ ಪ್ರದೇಶದ ಖುಷಿನಗರದಲ್ಲಿರುವ ಮನೆಯಲ್ಲಿ ಮದುವೆ ಸಮಾರಂಭ ನಡೆಯುವ ವೇಳೆ ಬಾವಿ ಮೇಲೆ ಹಾಕಿದ್ದ ಸ್ಲ್ಯಾಬ್‌ ಕುಸಿದು 13ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಬುಧವಾರ ರಾತ್ರಿ 8:30ಕ್ಕೆ ಈ ದುರ್ಘಟನೆ ನಡೆದಿದೆ.

ಮದುವೆ ಮನೆಯಲ್ಲಿ ಬಾವಿಯೊಂದು ಇತ್ತು. ಅದರ ಮೇಲೆ ಸ್ಲ್ಯಾಬ್‌ ಅಳವಡಿಸಿದ್ದ ಮನೆಯವರು , ಅಲ್ಲಿ ಚೇರ್‌ಗಳನ್ನು ಹಾಕಿದ್ದರು. ಕುರ್ಚಿಗಳ ಮೇಲೆ ಆಸೀನರಾಗಿದ್ದ ಮಹಿಳೆಯರು ಸೇರಿದಂತೆ ಮಕ್ಕಳು ಕುಳಿತುಕೊಂಡಿದ್ದರು. ಸಾಕಷ್ಟು ಜನರು ಇದ್ದ ಕಾರಣ ಸ್ಲ್ಯಾಬ್‌ಗೆ ಭಾರ ಹೆಚ್ಚಾಗಿದೆ. ಇದರಿಂದ ಸ್ಲ್ಯಾಬ್‌ ಏಕಾಏಕಿ ಕುಸಿದಿದೆ. ಇದರಿಂದ ಮಕ್ಕಳು ಸೇರಿದಂತೆ 13 ಜನ ಮರಣ ಹೊಂದಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ಪರಿಹಾರ ಘೋಷಿಸಲಾಗಿದೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್‌ ಅವರು ಘಟನೆ ಬಗ್ಗೆ ಮಾಹಿತಿ ಪಡೆದು ಕಂಬನಿ ಮಿಡಿದಿದ್ದಾರೆ. ನರೇಂದ್ರ ಮೋದಿಯವರು ಕೂಡ ವಿಷಯ ತಿಳಿದು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

 

Share Post