CrimeNational

ಇಟ್ಟಿಗೆಯಿಂದ ಜಜ್ಜಿ ಪ್ರಿಯತಮೆಯ ಹತ್ಯೆ ಮಾಡಿದ ಪ್ರಿಯಕರ

ಲಕ್ನೋ; ಪ್ರಿಯಕರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಪ್ರಿಯತಮೆಯನ್ನು ಇಟ್ಟಿಗೆಯಿಂದ ಜಜ್ಜಿ ಜಜ್ಜಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೀರತ್‌ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

ರಾಂಬಿರಿ ಎಂಬಾಕೆಯೇ ಕೊಲೆಯಾದ ದುರ್ದೈವಿ. ಈಕೆಗೆ 2015ರಲ್ಲೇ ವಿನೋದ್‌ ಎಂಬಾತನ ಜೊತೆ ಮದುವೆಯಾಗಿದ್ದಳು. ಆದ್ರೆ, ರಾಂಬಿರಿ ಒಂದೇ ವರ್ಷಕ್ಕೆ ಗಂಡನಿಂದ ದೂರವಾಗಿ ಒಬ್ಬಳೇ ಜೀವನ ನಡೆಸುತ್ತಿದ್ದಳು. ಇದೇ ವೇಳೆ ಆದೇಶ್‌ ಎಂಬಾತ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇನ್ನು ದೈಹಿಕವಾಗಿ ಇಬ್ಬರೂ ಸಂಬಂಧ ಬೆಳೆಸಿದ್ದು, ರಾಂಬಿರಿ ಗರ್ಬಿಣಿಯಾಗಿದ್ದಾಳೆ. ಹೀಗಾಗಿ ರಾಂಬಿರಿ ಮದುವೆಯಾಗುವಂತೆ ಆದೇಶ್‌ನನ್ನು ಪೀಡಿಸಿದ್ದಾಳೆ.

ಇದರಿಂದ ಕೋಪಗೊಂಡ ಆದೇಶ್‌, ತನ್ನ ಗೆಳೆಯರಾದ ಆರ್ಯನ್‌, ಸಂದೀಪ್‌ ಹಾಗೂ ರೋಹಿತ್‌ ಜೊತೆಗೂಡಿ ರಾಂಬಿರಿಯನ್ನು ಇಟ್ಟಿಗೆಯಿಂದ ಜಜ್ಜಿ ಜಜ್ಜಿ ಕೊಲೆ ಮಾಡಿದ್ದರು. ಈ ಪ್ರಕರಣದ ಸಂಬಂಧ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.

Share Post