Crime

ಪ್ರೇಮ ಪ್ರಕರಣದ ಹಿನ್ನೆಲೆ; ಇದೇ ಕಾರಣಕ್ಕೆ ನಡೆಯಿತಾ ಆತ್ಮಹತ್ಯೆ..?

ಮೈಸೂರು: ಇಲ್ಲಿನ ಮರಟಿಕ್ಯಾತನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜೆಡಿಎಸ್‌ ಮುಖಂಡ ಬೆಳವಾಡಿ ಶಿವಮೂರ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ೩೨ ವ ರ್ಷದ ಪ್ರದೀಪ್‌ ಆತ್ಮಹತ್ಯೆ ಮಾಡಿಕೊಂಡ ಯುವಕ. 

ಪ್ರದೀಪ್‌ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಆದರೂ ಸರ್ಕಾರಿ ಉದ್ಯೋಗಿಯೊಬ್ಬರನ್ನು ಪ್ರದೀಪ್‌ ಪ್ರೀತಿಸುತ್ತಿದ್ದರೆಂದು ಹೇಳಲಾಗಿದೆ. ಆಕೆ ಪ್ರದೀಪ್‌ಗೆ ಮದುವೆಯಾಗುವಂತೆ ಒತ್ತಡ ಹೇರಿದ್ದಳೆಂದು ತಿಳಿದುಬಂದಿದೆ. ಆದರೆ ಎರಡನೇ ಮದುವೆಗೆ ಪ್ರದೀಪ್‌ ಮನೆಯಲ್ಲಿ ಒಪ್ಪಿಲ್ಲ. ಈ ಕಾರಣದಿಂದ ಪ್ರದೀಪ್‌ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನೆಂದು ತಿಳಿದುಬಂದಿದೆ.

ಮಾನಸಿಕವಾಗಿ ನೊಂದಿದ್ದ ಪ್ರದೀಪ್‌  ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮೈಸೂರಿನ ಇಲವಾಲ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

Share Post