CrimeDistricts

ಗದ್ದೆಗೆ ಉರುಳಿಬಿದ್ದ KKRTC ಬಸ್‌; ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳು

ರಾಯಚೂರು; ಪ್ರೌಢಶಾಲಾ ಮಕ್ಕಳಿದ್ದ KKRTC ಬಸ್‌ ಮಧ್ಯರಾತ್ರಿ ಚಲಾಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿಬಿದ್ದಿದೆ. ದೇವದುರ್ಗ ಸಮೀಪದ ಅಂಜಳ ಕ್ರಾಸ್‌ ಬಳಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರವಾಸ ಹೋಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಸ್ಸನ್ನು ಕರೆಸಿ ಆ ಬಸ್‌ನಲ್ಲಿ ವಿದ್ಯಾರ್ಥಿಗಳು ಪ್ರವಾಸ ಮುಂದುವರೆಸಿದ್ದಾರೆ.

 

Share Post