BengaluruCrime

ಉರುಳಿಬಿದ್ದ ಓಂಶಕ್ತಿ ಭಕ್ತರಿದ್ದ ಬಸ್‌; 50ಕ್ಕೂ ಹೆಚ್ಚು ಮಂದಿಗೆ ಗಾಯ

ಆನೇಕಲ್; ಬೆಳ್ಳಂದೂರಿನಿಂದ ತಮಿಳುನಾಡಿನ ಓಂಶಕ್ತಿ ದೇಗುಲಕ್ಕೆ ಹೋಗುತ್ತಿದ್ದ ಬಸ್ಸೊಂದು ಆನೆಕಲ್‌ ಬಳಿ ಉರುಳಿಬಿದ್ದಿದೆ. ಇದರ ಪರಿಣಾಮ 50ಕ್ಕೂ ಹೆಚ್ಚು ಓಂಶಕ್ತಿ ಭಕ್ತರು ಗಾಯಗೊಂಡಿದ್ದಾರೆ. ಆನೇಕಲ್‌ ಬಳಿಯ ಬಿದರಗುಪ್ಪೆಯ ಕೆರೆಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ.

ಬೆಳಗಿನಜಾವ ಐದೂವರೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಮಗುಚಿಕೊಂಡಿದೆ. ಗಾಯಾಳುಗಳನ್ನು ಹತ್ತಿರದ ಆಕ್ಸ್‌ಫರ್ಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share Post